Monday, March 03, 2014
Thursday, February 20, 2014
ಹೊರಬಾನ ಜೀವಜಗತ್ತನ್ನು ಹೆಕ್ಕಿ ತೆಗೆಯಬಲ್ಲ 'ಜೇಮ್ಸ್ ವೆಬ್' ಗೆಂಟುತೋರ್ಪುಗ
೨೦೧೮ ಕ್ಕೆ ಹೊರಬಾನಿಗೆ ಚಿಮ್ಮಲಿರುವ ಜೇಮ್ಸ್ ವೆಬ್, ಹಬ್ಬಲ್ ನ ಸಾಧನೆಗಳನ್ನು ಒಂದು ಹೆಜ್ಜೆ ಮುಂದೆ ಒಯ್ಯಲಿದೆ. ಇದು ಹಬ್ಬಲ್ಗಿಂತ ದೊಡ್ಡ ಕನ್ನಡಿಗಳನ್ನು ಹೊಂದಿದೆ. ಇದು ಭೂಮಿಯನ್ನು ಸುತ್ತುವದಿಲ್ಲ, ಬದಲಾಗಿ ಚಂದ್ರನಿಗಿಂತ ಸುಮಾರು ಮೂರು ಪಟ್ಟು ದೂರ, ಸೂರ್ಯನ ಸುತ್ತ ಸುತ್ತಲಿದೆ. ಈ ಪುಟ ಹೆಚ್ಚಿನ ಮಾಹಿತಿ ನೀಡುವದು.
http://www.nasa.gov/externalflash/webb_hubble/
ಬಿಗ್ ಬ್ಯಾಂಗ್ಇಂದ ಮೊದಲಾಗಿ ಸತತವಾಗಿ ಹಿಗ್ಗುತ್ತಿರುವ ಬ್ರಹ್ಮಾಂಡದ ಮುಮ್ಮೊದಲ ಚುಕ್ಕಿಗಳು ಬಲು ದೂರದಲ್ಲಿವೆ, ಅವು ಬಿಲಿಯನ್ ಗಟ್ಟಲೆ ವರುಷಗಳ ಹಿಂದೆ ಇದ್ದ ಸ್ತಿತಿ ನಮಗೆ ಈಗ ತಿಳಿಯುತ್ತದೆ, ಏಕೆಂದರೆ ಅಂದಿಗೆ ಹೊರಟ ಬೆಳಕು ನಮ್ಮನ್ನು ಇಂದು ತಲುಪುತ್ತಿದೆ. ಎಷ್ಟು ದೂರದ ಚುಕ್ಕಿಗಳು ನಮಗೆ ತೋರುತ್ತವೆಯೋ ಅವುಗಳ ಅಸ್ಟು ಹಳೆಯ ಸ್ತಿತಿ ನಮಗೆ ತಿಳಿಯುತ್ತದೆ.
http://www.nasa.gov/externalflash/webb_hubble/
ಬಿಗ್ ಬ್ಯಾಂಗ್ಇಂದ ಮೊದಲಾಗಿ ಸತತವಾಗಿ ಹಿಗ್ಗುತ್ತಿರುವ ಬ್ರಹ್ಮಾಂಡದ ಮುಮ್ಮೊದಲ ಚುಕ್ಕಿಗಳು ಬಲು ದೂರದಲ್ಲಿವೆ, ಅವು ಬಿಲಿಯನ್ ಗಟ್ಟಲೆ ವರುಷಗಳ ಹಿಂದೆ ಇದ್ದ ಸ್ತಿತಿ ನಮಗೆ ಈಗ ತಿಳಿಯುತ್ತದೆ, ಏಕೆಂದರೆ ಅಂದಿಗೆ ಹೊರಟ ಬೆಳಕು ನಮ್ಮನ್ನು ಇಂದು ತಲುಪುತ್ತಿದೆ. ಎಷ್ಟು ದೂರದ ಚುಕ್ಕಿಗಳು ನಮಗೆ ತೋರುತ್ತವೆಯೋ ಅವುಗಳ ಅಸ್ಟು ಹಳೆಯ ಸ್ತಿತಿ ನಮಗೆ ತಿಳಿಯುತ್ತದೆ.
Wednesday, May 15, 2013
ಕನ್ನಡ ನಿರ್ಮಾಪಕ, ಕನ್ನಡ ಹೀರೋ, ಸಿನಿಮಾ ಮಾತ್ರ ತಮಿಳು!!
ಕನ್ನಡದ ನಿರ್ರ್ಮಾಪಕ ಕೆ. ಮಂಜು, ಕನ್ನಡ ನಟ ಸುದೀಪ್ ಜೊತೆ "ತಮಿಳು" ಸಿನಿಮಾ ಮಾಡ್ತಾರಂತೆ!! ಅದು ಜಾಸ್ತಿ ಓಡೋದು ಕರ್ನಾಟಕದಲ್ಲೇ ಅಂತ ಬೇರೆ ಹೆಳಬೇಕಿಲ್ಲ.. ಕರ್ನಾಟಕದಲ್ಲಿ ಕನ್ನಡಕ್ಕೊದಗಿರುವ "ದುಸ್ತಿತಿಗೆ" ಹಿಡಿದ ಕನ್ನಡಿ...
Wednesday, May 16, 2012
ವಿಸ್ಮಯಯುತ ನಾಲ್ಕನೇ ಆಯಾಮ ಮತ್ತು ದೇವರು
ಮೊದಲ ಮೂರು ಆಯಾಮಗಳು(dimensions) ನಮಗೆ ತಿಳಿದದ್ದೇ. ಎರಡು ಬಿಂದುಗಳನ್ನು ಸೇರಿಸಿದರೆ ಮೊದಲನೇ ಆಯಾಮ ಸಿಗುತ್ತದೆ, ಅದರಂತೆ ಒಂದು ಗೆರೆಗೆ ಅಡ್ಡಡ್ಡ ಅಂದರೆ ಪರ್ಪೆಂಡಿಕ್ಯುಲರ್ ಆಗಿ ಇನ್ನೊಂದು ಗೆರೆ ಎಳೆದರೆ ಒಂದು ಸಮತಲ ಅಂದರೆ ಎರಡನೇ ಆಯಾಮ ಸಿಗುತ್ತದೆ. ಎರಡನೇ ಆಯಾಮದಲ್ಲಿ ಅಡ್ಡ ಮತ್ತು ಉದ್ದ ಮಾತ್ರ ಅಳತೆಗಳು, ಎತ್ತರ ಇರುವದಿಲ್ಲ. ಮುಂದುವರೆದು ಮೂರು ಸಮತಲಗಳನ್ನು ಒಂದಕ್ಕೊಂದು ಪರ್ಪೆಂಡಿಕ್ಯುಲರ್ ಆಗಿ ಇರಿಸಿದರೆ, ನಮಗೆ ಮೂರನೇ ಆಯಾಮ ಸಿಗುತ್ತದೆ ಅಲ್ಲವೇ? ಅಂದರೆ ಮೂರು ಸಮತಲಗಳ ನಡುವಿನ ಸ್ಫೇಸ್. ಅದೇ ರೀತಿ ನಾಕು ಸ್ಫೇಸ್ ಒಂದಕ್ಕೊಂದು ಪರ್ಪೆಂಡಿಕ್ಯಲರ್ ಆಗಿ ಇದ್ದಿದ್ದರೆ, ಅಲ್ಲಿ ಸಿಗುವದೇ ನಾಲ್ಕನೇ ಆಯಾಮದ ಜಗತ್ತು!!
ನಾಲ್ಕನೇ ಆಯಾಮವನ್ನು ಮನುಜ ಮಿದುಳಿಗೆ ಊಹಿಸಿಕೊಳ್ಳಲು ಸಾದ್ಧ್ಯವೇ ಇಲ್ಲ. ಆದರೆ ಅದರ ಇರುವಿಕೆಯಿಂದ ನಮ್ಮ ಮೂರು ಆಯಾಮಗಳ ಜಗತ್ತಿನ ಮೇಲಾಗುವ ಪರಿಣಾಮ ಊಹಿಸಿಕೊಳ್ಳಬಹುದು. ಎರಡನೇ ಆಯಾಮದಲ್ಲಿ ಬದುಕುವ ಜೀವಿಗೆ ಹೇಗೆ ನಮ್ಮ 3D ಜಗತ್ತಿನ ಇರುವಿಕೆ ಊಹೆಗೆ ನಿಲುಕದ್ದೋ ಹಾಗೆಯೇ ನಮ್ಮ ಪರಿಸ್ಥಿತಿ. ಇರುವೆಗಳು ಬದುಕುತ್ತಿರುವದು 2D ಜಗತ್ತಲ್ಲಂತೆ. ಅಂದರೆ ಇರುವೆಗೆ ಮೂರನೇ ಆಯಾಮ ಊಹೆಗೆ ನಿಲುಕದ್ದು!. ನೆಲದಿಂದ ಗೋಡೆ ಹತ್ತುವಾಗ ಇರುವೆಗೆ ಒಂದು ಸಮತಲದಿಂದ ಇನ್ನೊಂದು ಸಮತಲಕ್ಕೆ ಕಾಲಿಡುವಂತೆ ಅಸ್ಟೇ. ಮೊದಲ ಸಮತಲಕ್ಕೆ ಅಡ್ಡವಾಗಿ ತಾನು ನಡಿಯುತ್ತಿದ್ದೇನೆಂದಾಗಲಿ, ಎತ್ತರಕ್ಕೆ ಏರುತ್ತಿದ್ದೇನೆಂಬ ಪರಿಕಲ್ಪನೆಯಾಗಲಿ ಅದಕ್ಕೆ ಮೂಡದು.
ನಾಲ್ಕನೇ ಆಯಾಮದ ವಿಸ್ಮಯಗಳೇನೆಂದರೆ, ನಾಲ್ಕು ಒಂದಕ್ಕೊಂದು ಪರ್ಪೆಂಡಿಕ್ಯುಲರ್ ಇರುವ ಸ್ಪೇಸ್ಗಳ ನಡುವಿನ ಜಾಗ(ಇದನ್ನು ಹೈಪರ್ಸ್ಫೇಸ್ ಅನ್ನಬಹುದ?)ದಿಂದ ನೋಡಿದಾಗ, ನಮ್ಮ 3D ಸ್ಪೇಸ್ನ ವಸ್ತುಗಳ ಹೊರ ಒಳ ಭಾಗಗಳು ಒಟ್ಟಿಗೆ ತೋರುತ್ತದೆ. ಅಂದರೆ ಒಂದು ಸಾಲಿಡ್ ಚೆಂಡಿನ ಹೂರಣದೊಳಗೆ ಮತ್ತೊಂದು ಸಾಲಿಡ್ ಆದ, ಕ್ಯೂಬ್ ಒಂದನ್ನು ಹುದುಗಿಸಲಾಗಿದೆ ಅಂದುಕೊಳ್ಳಿ, ಹೈಪಸ್ಪೇಸ್ನಿಂದ ನೋಡಿದಾಗ ಚೆಂಡು, ಅದರೊಳಗಿನ ಹೂರಣ, ಮತ್ತು ಅದರಲ್ಲಿ ಹುದುಗಿಸಿದ ಕ್ಯೂಬ್ ಎಲ್ಲವೂ ಒಟ್ಟಿಗೆ ತೋರುತ್ತದೆ. ಇದು ಹೇಗೆಂದರೆ, ಸಮತಲದ ಮೇಲೊಂದು, squareನ್ನು ಚಿತ್ರಿಸಲಾಗಿದೆ ಅನ್ನಿ. ಸಮತಲದ ಮೇಲಿಂದ ನೋಡಿದಾಗ, ಅದರ ದಂಡೆಗಳು ಅಂದರೆ edges ಮಾತ್ರ ಕಾಣುತ್ತದೆ. ಅದೇ ಮೂರನೇ ಆಯಾಮದ ಎತ್ತರದಿಂದ ನೋಡಿದಾಗ ಆ ಸರ್ಕಲ್ ನ ಒಳಭಾಗ, ಅದರಲ್ಲಿ ತುಂಬಲಾದ ಬಣ್ಣ ಎಲ್ಲವೂ ತೋರುತ್ತದೆ. ಅದೇ ರೀತಿ ಮೂರನೇ ಆಯಾಮದ ವಸ್ತುಗಳ ಒಳ ಮತ್ತು ಹೊರ ಭಾಗಗಳು ನಾಲ್ಕನೇ ಆಯಾಮದಿಂದ ಒಟ್ಟಿಗೇ ತೋರುತ್ತವೆ.

ಇನ್ನೊಂದು ಉದಾಹರಣೆ, ಪೇಪರ್ ಒಂದರ ಮೇಲೆ clockwise ಆಗಿ ಮುಕ್ಕಾಲು ಸರ್ಕಲ್ ಹಾಕಿ, ಅದರ ತುದಿಗೆ ಬಾಣದ ಗುರುತು ಹಾಕಿ. ಈ ತಿರುಚು ಬಾಣದ ದಿಕ್ಕನ್ನು anticlockwise ಬದಲಾಯಿಸಬೇಕೆಂದರೆ, ಅದರ ಬಾಣದ ಗುರುತನ್ನು ಅಳಿಸಿ, ಅದರ ಬಾಲಕ್ಕೆ ಸಿಕ್ಕಿಸಬೇಕಲ್ಲವೇ? ಆದರ ಏನನ್ನೂ ಬದಲಾಯಿಸದೇ ಅದರ ದಿಕ್ಕನ್ನು ಬದಲಾಯಿಸಲು ಸಾಧ್ಯವೇ? ಸಾಧ್ಯ ಹೇಗೆಂದರೆ ಪೇಪರ್ transparent ಇದೆ ಅನ್ಕೊಳ್ಳಿ, ಆಗ ಪೇಪರ್ ಅನ್ನು flip ಅಂದರೆ ಅದರ ಬೆನ್ನು ಭಾಗವನ್ನು ಮೇಲೆ ಮಾಡಿದರೆ ಆಯ್ತು, ತಿರುಚು ಬಾಣದ ದಿಕ್ಕು ಈಗ anticlockwise ಆಗುತ್ತದೆ. ಥೇಟ್ ಇದೇ ರೀತಿ, ಈಗ ತುದಿಯೊಂದಕ್ಕೆ ಬಾಣದ ಗುರುತಿರುವ ಸ್ಪ್ರಿಂಗ್ ಒಂದನ್ನು ತೆಗೆದುಕೊಳ್ಳಿ. ಸ್ಪ್ರಿಂಗ್ನ ತಿರುಚಿನ ದಿಕ್ಕನ್ನು ಬದಲಾಯಿಸಲು ಅದರ ಬಾಣವನ್ನು ಕಿತ್ತು, ಕೆಳ ತುದಿಗೆ ಅಂಟಿಸಬೇಕು ಮತ್ತು ಮೇಲಿಂದ ಕೆಳಗೆ ಬರಬೇಕು. ಆದರೆ ನಾಲ್ಕನೇ ಆಯಾಮದಲ್ಲಿ ಸ್ಪೇಸನ್ನು flip ಮಾಡಿದರೆ ಸಾಕು, ಸ್ಪ್ರಿಂಗನ್ನು ಮುಟ್ಟದೆಯೇ ಅದರ ತಿರುಚು ದಿಕ್ಕನ್ನು ಬದಲಾಯಿಸಿ ಬಿಡಬಹುದು.
ಸಮತಲದ ಮೂಲಕ 3ಡಿ ಚೆಂಡೊಂದು ಹಾಯ್ದು ಹೋಗುವಾಗ, ಸಮತಲದ ಮೇಲಿನ 2ಡಿ ಜೀವಿಗೆ ಅದು ಹೇಗೆ ತೋರುತ್ತದೆ? ಶೂನ್ಯದಿಂದ ಸರ್ಕಲ್ ಒಂದು ಹುಟ್ಟಿ, ಅದು ದೊಡ್ಡದಾಗುತ್ತ ಹೋಗಿ, ಒಂದು ಗಾತ್ರ ತಲುಪಿದ ಮೇಲೆ, ಮತ್ತೆ ಚಿಕ್ಕದಾಗುತ್ತ ಹೋಗಿ, ಮಾಯವಾಗುತ್ತದೆ. ಅದೇ ರೀತಿ 4ಡಿಯ ಹೈಪರ್ಚೆಂಡು 3ಡಿ ಸ್ಪೇಸ್ನಲ್ಲಿ ಹಾಯ್ದು ಹೋಗುವಾಗ ಹೇಗೆ ತೋರುತ್ತದೆಯೆಂದರೆ, ಶೂನ್ಯದಿಂದ ಚೆಂಡೊಂದು ಹುಟ್ಟಿ, ಗಾತ್ರದಲ್ಲಿ ದೊಡ್ಡದಾಗುತ್ತ, ಒಂದು ಗಾತ್ರ ತಲುಪಿದ ಮೇಲೆ, ಮತ್ತೆ ಚಿಕ್ಕದಾಗುತ್ತ ಹೋಗಿ, ಮಾಯವಾಗಿ ಬಿಡುತ್ತದೆ. ನೂರಾರು ವರ್ಷ ತಪಸ್ಸುಗೈದ ರುಷಿಮುನಿಗೆ ದರುಶನ ನೀಡಿ ಮಾಯವಾಗುವ ದೇವತೆಯಂತೆ!! ಹಿಂದೂ ಪುರಾಣಗಳ ದೇವತೆಗಳ ಕಲ್ಪನೆ ನಿಜವಿರುವದಾದರೆ ಅವರು 4D ಜೀವಿಗಳಾಗಿರಬೇಕು!
hypercube ಎಂದು ಹೇಳಲಾಗುವ ಈ ಚಿತ್ರ ೪ನೇ ಆಯಾಮಕ್ಕೆ ಯಾವುದೇ ನ್ಯಾಯ ಒದಗಿಸದು, ಯಾಕಂದ್ರೆ, ಇದು ಹೇಗೆ ಅಂದ್ರೆ 2D ಜಗತ್ತಲ್ಲಿ ಚೌಕದೊಳಗೊಂದು ಚೌಕ ಬರೆದು ಆರು ಚೌಕಗಳು ಸೇರಿ ಆಗುವ ಕ್ಯೂಬನ್ನು ಊಹಿಸಿಕೊಂಡಂತೆ. ಆದರೆ ಕ್ಯೂಬ್ನ ನಿಜವಾದ ಆಕ್ರುತಿಯೇ ಬೇರೆ!
ನಾಲ್ಕನೇ ಆಯಾಮವನ್ನು ಮನುಜ ಮಿದುಳಿಗೆ ಊಹಿಸಿಕೊಳ್ಳಲು ಸಾದ್ಧ್ಯವೇ ಇಲ್ಲ. ಆದರೆ ಅದರ ಇರುವಿಕೆಯಿಂದ ನಮ್ಮ ಮೂರು ಆಯಾಮಗಳ ಜಗತ್ತಿನ ಮೇಲಾಗುವ ಪರಿಣಾಮ ಊಹಿಸಿಕೊಳ್ಳಬಹುದು. ಎರಡನೇ ಆಯಾಮದಲ್ಲಿ ಬದುಕುವ ಜೀವಿಗೆ ಹೇಗೆ ನಮ್ಮ 3D ಜಗತ್ತಿನ ಇರುವಿಕೆ ಊಹೆಗೆ ನಿಲುಕದ್ದೋ ಹಾಗೆಯೇ ನಮ್ಮ ಪರಿಸ್ಥಿತಿ. ಇರುವೆಗಳು ಬದುಕುತ್ತಿರುವದು 2D ಜಗತ್ತಲ್ಲಂತೆ. ಅಂದರೆ ಇರುವೆಗೆ ಮೂರನೇ ಆಯಾಮ ಊಹೆಗೆ ನಿಲುಕದ್ದು!. ನೆಲದಿಂದ ಗೋಡೆ ಹತ್ತುವಾಗ ಇರುವೆಗೆ ಒಂದು ಸಮತಲದಿಂದ ಇನ್ನೊಂದು ಸಮತಲಕ್ಕೆ ಕಾಲಿಡುವಂತೆ ಅಸ್ಟೇ. ಮೊದಲ ಸಮತಲಕ್ಕೆ ಅಡ್ಡವಾಗಿ ತಾನು ನಡಿಯುತ್ತಿದ್ದೇನೆಂದಾಗಲಿ, ಎತ್ತರಕ್ಕೆ ಏರುತ್ತಿದ್ದೇನೆಂಬ ಪರಿಕಲ್ಪನೆಯಾಗಲಿ ಅದಕ್ಕೆ ಮೂಡದು.
ನಾಲ್ಕನೇ ಆಯಾಮದ ವಿಸ್ಮಯಗಳೇನೆಂದರೆ, ನಾಲ್ಕು ಒಂದಕ್ಕೊಂದು ಪರ್ಪೆಂಡಿಕ್ಯುಲರ್ ಇರುವ ಸ್ಪೇಸ್ಗಳ ನಡುವಿನ ಜಾಗ(ಇದನ್ನು ಹೈಪರ್ಸ್ಫೇಸ್ ಅನ್ನಬಹುದ?)ದಿಂದ ನೋಡಿದಾಗ, ನಮ್ಮ 3D ಸ್ಪೇಸ್ನ ವಸ್ತುಗಳ ಹೊರ ಒಳ ಭಾಗಗಳು ಒಟ್ಟಿಗೆ ತೋರುತ್ತದೆ. ಅಂದರೆ ಒಂದು ಸಾಲಿಡ್ ಚೆಂಡಿನ ಹೂರಣದೊಳಗೆ ಮತ್ತೊಂದು ಸಾಲಿಡ್ ಆದ, ಕ್ಯೂಬ್ ಒಂದನ್ನು ಹುದುಗಿಸಲಾಗಿದೆ ಅಂದುಕೊಳ್ಳಿ, ಹೈಪಸ್ಪೇಸ್ನಿಂದ ನೋಡಿದಾಗ ಚೆಂಡು, ಅದರೊಳಗಿನ ಹೂರಣ, ಮತ್ತು ಅದರಲ್ಲಿ ಹುದುಗಿಸಿದ ಕ್ಯೂಬ್ ಎಲ್ಲವೂ ಒಟ್ಟಿಗೆ ತೋರುತ್ತದೆ. ಇದು ಹೇಗೆಂದರೆ, ಸಮತಲದ ಮೇಲೊಂದು, squareನ್ನು ಚಿತ್ರಿಸಲಾಗಿದೆ ಅನ್ನಿ. ಸಮತಲದ ಮೇಲಿಂದ ನೋಡಿದಾಗ, ಅದರ ದಂಡೆಗಳು ಅಂದರೆ edges ಮಾತ್ರ ಕಾಣುತ್ತದೆ. ಅದೇ ಮೂರನೇ ಆಯಾಮದ ಎತ್ತರದಿಂದ ನೋಡಿದಾಗ ಆ ಸರ್ಕಲ್ ನ ಒಳಭಾಗ, ಅದರಲ್ಲಿ ತುಂಬಲಾದ ಬಣ್ಣ ಎಲ್ಲವೂ ತೋರುತ್ತದೆ. ಅದೇ ರೀತಿ ಮೂರನೇ ಆಯಾಮದ ವಸ್ತುಗಳ ಒಳ ಮತ್ತು ಹೊರ ಭಾಗಗಳು ನಾಲ್ಕನೇ ಆಯಾಮದಿಂದ ಒಟ್ಟಿಗೇ ತೋರುತ್ತವೆ.

ಇನ್ನೊಂದು ಉದಾಹರಣೆ, ಪೇಪರ್ ಒಂದರ ಮೇಲೆ clockwise ಆಗಿ ಮುಕ್ಕಾಲು ಸರ್ಕಲ್ ಹಾಕಿ, ಅದರ ತುದಿಗೆ ಬಾಣದ ಗುರುತು ಹಾಕಿ. ಈ ತಿರುಚು ಬಾಣದ ದಿಕ್ಕನ್ನು anticlockwise ಬದಲಾಯಿಸಬೇಕೆಂದರೆ, ಅದರ ಬಾಣದ ಗುರುತನ್ನು ಅಳಿಸಿ, ಅದರ ಬಾಲಕ್ಕೆ ಸಿಕ್ಕಿಸಬೇಕಲ್ಲವೇ? ಆದರ ಏನನ್ನೂ ಬದಲಾಯಿಸದೇ ಅದರ ದಿಕ್ಕನ್ನು ಬದಲಾಯಿಸಲು ಸಾಧ್ಯವೇ? ಸಾಧ್ಯ ಹೇಗೆಂದರೆ ಪೇಪರ್ transparent ಇದೆ ಅನ್ಕೊಳ್ಳಿ, ಆಗ ಪೇಪರ್ ಅನ್ನು flip ಅಂದರೆ ಅದರ ಬೆನ್ನು ಭಾಗವನ್ನು ಮೇಲೆ ಮಾಡಿದರೆ ಆಯ್ತು, ತಿರುಚು ಬಾಣದ ದಿಕ್ಕು ಈಗ anticlockwise ಆಗುತ್ತದೆ. ಥೇಟ್ ಇದೇ ರೀತಿ, ಈಗ ತುದಿಯೊಂದಕ್ಕೆ ಬಾಣದ ಗುರುತಿರುವ ಸ್ಪ್ರಿಂಗ್ ಒಂದನ್ನು ತೆಗೆದುಕೊಳ್ಳಿ. ಸ್ಪ್ರಿಂಗ್ನ ತಿರುಚಿನ ದಿಕ್ಕನ್ನು ಬದಲಾಯಿಸಲು ಅದರ ಬಾಣವನ್ನು ಕಿತ್ತು, ಕೆಳ ತುದಿಗೆ ಅಂಟಿಸಬೇಕು ಮತ್ತು ಮೇಲಿಂದ ಕೆಳಗೆ ಬರಬೇಕು. ಆದರೆ ನಾಲ್ಕನೇ ಆಯಾಮದಲ್ಲಿ ಸ್ಪೇಸನ್ನು flip ಮಾಡಿದರೆ ಸಾಕು, ಸ್ಪ್ರಿಂಗನ್ನು ಮುಟ್ಟದೆಯೇ ಅದರ ತಿರುಚು ದಿಕ್ಕನ್ನು ಬದಲಾಯಿಸಿ ಬಿಡಬಹುದು.
ಸಮತಲದ ಮೂಲಕ 3ಡಿ ಚೆಂಡೊಂದು ಹಾಯ್ದು ಹೋಗುವಾಗ, ಸಮತಲದ ಮೇಲಿನ 2ಡಿ ಜೀವಿಗೆ ಅದು ಹೇಗೆ ತೋರುತ್ತದೆ? ಶೂನ್ಯದಿಂದ ಸರ್ಕಲ್ ಒಂದು ಹುಟ್ಟಿ, ಅದು ದೊಡ್ಡದಾಗುತ್ತ ಹೋಗಿ, ಒಂದು ಗಾತ್ರ ತಲುಪಿದ ಮೇಲೆ, ಮತ್ತೆ ಚಿಕ್ಕದಾಗುತ್ತ ಹೋಗಿ, ಮಾಯವಾಗುತ್ತದೆ. ಅದೇ ರೀತಿ 4ಡಿಯ ಹೈಪರ್ಚೆಂಡು 3ಡಿ ಸ್ಪೇಸ್ನಲ್ಲಿ ಹಾಯ್ದು ಹೋಗುವಾಗ ಹೇಗೆ ತೋರುತ್ತದೆಯೆಂದರೆ, ಶೂನ್ಯದಿಂದ ಚೆಂಡೊಂದು ಹುಟ್ಟಿ, ಗಾತ್ರದಲ್ಲಿ ದೊಡ್ಡದಾಗುತ್ತ, ಒಂದು ಗಾತ್ರ ತಲುಪಿದ ಮೇಲೆ, ಮತ್ತೆ ಚಿಕ್ಕದಾಗುತ್ತ ಹೋಗಿ, ಮಾಯವಾಗಿ ಬಿಡುತ್ತದೆ. ನೂರಾರು ವರ್ಷ ತಪಸ್ಸುಗೈದ ರುಷಿಮುನಿಗೆ ದರುಶನ ನೀಡಿ ಮಾಯವಾಗುವ ದೇವತೆಯಂತೆ!! ಹಿಂದೂ ಪುರಾಣಗಳ ದೇವತೆಗಳ ಕಲ್ಪನೆ ನಿಜವಿರುವದಾದರೆ ಅವರು 4D ಜೀವಿಗಳಾಗಿರಬೇಕು!
hypercube ಎಂದು ಹೇಳಲಾಗುವ ಈ ಚಿತ್ರ ೪ನೇ ಆಯಾಮಕ್ಕೆ ಯಾವುದೇ ನ್ಯಾಯ ಒದಗಿಸದು, ಯಾಕಂದ್ರೆ, ಇದು ಹೇಗೆ ಅಂದ್ರೆ 2D ಜಗತ್ತಲ್ಲಿ ಚೌಕದೊಳಗೊಂದು ಚೌಕ ಬರೆದು ಆರು ಚೌಕಗಳು ಸೇರಿ ಆಗುವ ಕ್ಯೂಬನ್ನು ಊಹಿಸಿಕೊಂಡಂತೆ. ಆದರೆ ಕ್ಯೂಬ್ನ ನಿಜವಾದ ಆಕ್ರುತಿಯೇ ಬೇರೆ!
Friday, June 24, 2011
A Poem Using Google Translate for Kannada.
http://translate.google.com/#en|kn|
ನನ್ನ ಪ್ರೀತಿ ಓಹ್!
ನಾನು, ಏನು ಹೇಳಲು ಸಾಧ್ಯ
ವ್ಯಕ್ತಪಡಿಸಲು ಭಾವನೆ,
ಇಲ್ಲ ಪದಗಳು.
ಪ್ರೀತಿಯ ಅಲೆಗಳು,
ಹೃದಯ ಸಾಗರದಲ್ಲಿ,
ನೂರಾರು ಸಾವಿರಾರು.
ನನ್ನ ಕಣ್ಣುಗಳು ಮುಚ್ಚಿದ
ಸಮಯ ನಿಮ್ಮ ಮಾತ್ರ ಚಿತ್ರವನ್ನು
ಯಾವಾಗಲೂ ಕಾಣುತ್ತವೆ.
I typed following to achieve above poem,
oh my love!
what can i tell,
express feeling,
not words.
waves of love,
in heart ocean,
hundreds thousands.
my eyes closed
time your only picture's
always will look.
:-):-):-)
ನನ್ನ ಪ್ರೀತಿ ಓಹ್!
ನಾನು, ಏನು ಹೇಳಲು ಸಾಧ್ಯ
ವ್ಯಕ್ತಪಡಿಸಲು ಭಾವನೆ,
ಇಲ್ಲ ಪದಗಳು.
ಪ್ರೀತಿಯ ಅಲೆಗಳು,
ಹೃದಯ ಸಾಗರದಲ್ಲಿ,
ನೂರಾರು ಸಾವಿರಾರು.
ನನ್ನ ಕಣ್ಣುಗಳು ಮುಚ್ಚಿದ
ಸಮಯ ನಿಮ್ಮ ಮಾತ್ರ ಚಿತ್ರವನ್ನು
ಯಾವಾಗಲೂ ಕಾಣುತ್ತವೆ.
I typed following to achieve above poem,
oh my love!
what can i tell,
express feeling,
not words.
waves of love,
in heart ocean,
hundreds thousands.
my eyes closed
time your only picture's
always will look.
:-):-):-)
Wednesday, October 28, 2009
ಕನ್ನಡಕ್ಕೆ ಅಪಾಯಕಾರಿಯಾಗುತ್ತಿರುವ ತೆಲುಗು ಸಿನಿಮಾಗಳು!!
ತೆಲುಗು ಭಾಷೆ ಕನ್ನಡಕ್ಕೆ, ಇಲ್ಲವೇ ಅದನ್ನೇ ಇನ್ನೊಂದು ಬಗೆಯಲ್ಲಿ ಹೇಳುವದಾದರೆ, ತೆಲುಗುರು ಕನ್ನಡಿಗರಿಗೆ ಹೆಚ್ಚು ಹತ್ತಿರದವರಾಗಿರುವ(ಬೇರೆ ತೆಂಕಣ ನುಡಿಗಳ ಹೋಲಿಕೆಯಲ್ಲಿ) ನುಡಿಗರು. ಆದರೆ ಇತ್ತೀಚೆಗೆ ಕನ್ನಡಿಗರಲ್ಲಿ ತೆಲುಗಿನ ಬಗೆಗಿನ ಅನುರಾಗ, ಒಂದು ಬಗೆಯ ಒಲವು ಬೆಳೆದಂತೆ ತೋರುವದಲ್ಲದೇ, ತೆಲುಗರ ದಬ್ಬಾಳಿಕೆಯೂ ಸೇರಿ, ಕರ್ನಾಡಿನಲ್ಲೇ ಕನ್ನಡ ಬಡವಾಗುತ್ತಿರುವಂತೆ ತೋರುತ್ತಿದೆ.
ಇದಕ್ಕೆ ಕಾರಣಗಳು:
೧) ಜನ ಕನ್ನಡ ಬಿಟ್ಟು ಬೇರೆ ನುಡಿಯ ಸಿನಿಮಾ ನೋಡದೇ ಇರುವ ಕಡೆಗಳಲ್ಲೆಲ್ಲಾ, ತೆಲುಗು ಸಿನಿಮಾಗಳು ತೆರೆ ಕಾಣುತ್ತಿವೆ. ಹುಬ್ಬಳ್ಳಿ, ಬೆಳಗಾವಿ, ಜಮಖಂಡಿಯಂತ ಕಡೆ ಮೊದಲೆಲ್ಲ ಅಂದರೆ ಬರೀ ೩-೪ ವರುಷಗಳ ಹಿಂದಸ್ಟೇ, ಕನ್ನಡ ಬಿಟ್ಟರೆ ಹಿಂದಿ ಸಿನಿಮಾಗಳಸ್ಟೇ ತೆರೆ ಕಾಣುತ್ತಿದ್ದುದು, ಈಗ ಅಲ್ಲೆಲ್ಲ ತೆಲುಗು ಸಿನಿಮಾಗಳು ತೆರೆ ಕಾಣುತ್ತಿವೆ.
೨) ತೆಲುಗಿನ ಕನ್ನಡ News ಚಾನೆಲ್ TV9, ಈಗಂತೂ ಇನ್ನಿಲ್ಲದಂತೆ ಒತ್ತಿ ಒತ್ತಿ, ತೆಲುಗು ಸಿನಿಮಾಗಳ ಬಗೆಗೆ, ಹೆಜ್ಜೆ ಹೆಜ್ಜೆಗೂ ಮಾಹಿತಿ ಕೊಡತೊಡಗಿದ್ದಾರೆ. ಅಲ್ಲಿನ ಯಾವುದೋ ಜೂನಿಯರ್ ನಟ ಹೂಂಸು ಬಿಟ್ಟರೂ ಕರ್ನಾಟಕದ ನಂಬರ್ ೧ ಸುದ್ದಿ ಚಾನೆಲ್ ಅನ್ನಿಸಿಕೊಂಡಿರುವ TV9 ನಲ್ಲಿ ದೊಡ್ಡ ಸುದ್ದಿ. ಕನ್ನಡದ ದೊಡ್ಡ ಬ್ಯಾನರ್ ಸಿನಿಮಾ ಸುದ್ದಿನೂ ಅದರ ಮುಂದೆ ಸಪ್ಪೆ ಸಪ್ಪೆ!!!! ಇದನ್ನು ಕೇಳುವವರೇ ಇಲ್ಲವೇನೋ :-(
೩) ಕರ್ನಾಟಕದ ರಾಜಕೀಯದಲ್ಲಿ ತೆಲುಗರ ಕೈ ದೊಡ್ಡದಾಗಿದೆ. ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕ್ರಿಷ್ನದೇವರಾಯನ ಚಿತ್ರವನ್ನು ಮುದ್ರಿಸುವ ನಿರ್ಧಾರ ಒಂದು ದೊಡ್ಡ ಉದಾಹರಣೆ. ಕಾರಣ, ಕ್ರಿಷ್ನದೇವರಾಯ ಕನ್ನಡ, ತೆಲುಗು ಎರಡಕ್ಕೂ ಪ್ರಾಧನ್ಯತೆ ಕೊಟ್ಟಿದ್ದಕ್ಕೆ. ಆಗ ಕರ್ನಾಟಕ, AP ಒಂದೇ ಆಗಿತ್ತು, ಈಗ ಆಂದ್ರಗೆ ತೆಲುಗು ಇದೆ, ಕರ್ನಾಟಕದಲ್ಲಿ ಕನ್ನಡಕ್ಕೇ ಹಕ್ಕಿರುವದು, ಇದನ್ನು ಕಾಯ್ದಿರಿಸಿಕೊಳ್ಳುವ ಹೊಣೆ ಕನ್ನಡಿಗರದ್ದು. ರಾಜಕೀಯದ ವಿಚಾರದಲ್ಲಿ "ಕನ್ನಡ ಮಾತಾಡುವ ಪರ ಭಾಷಿಕ"ರನ್ನು ಗುರುತಿಸಿ, ಅವರನ್ನು ಎಲ್ಲಿಡಬೇಕೋ ಅಲ್ಲಿಡುವ ಹೊಣೆ ಕನ್ನಡಿಗರದ್ದು.
ಇದಕ್ಕೆ ಪರಿಹಾರಗಳು:
೧) ಕನ್ನಡಿಗರು ತೆಲುಗು/ತಮಿಳು ಸಿನಿಮಾಗಳನ್ನು ಸಿನಿಮಾಮಂದಿರಗಳಲ್ಲಿ ನೋಡುವದನ್ನು ಬಿಡಬೇಕು. ಕನ್ನಡ ಸಿನಿಮಾಗಳನ್ನು ಸಿನಿಮಾಮಂದಿರಗಳಲ್ಲಿ ನೋಡಿ, ಒಳ್ಳೆಯ ಕನ್ನಡ ಸಿನಿಮಾಗಳಿಗೆ ಬೆಂಬಲ ನೀಡಬೇಕು.
೨) TV9 ಗೆ ಕೊಟ್ಟಿರುವ ಹಕ್ಕನ್ನು ಸರಕಾರ ಹಿಂಪಡೆಯಬೇಕು. ತೆಲುಗು ಸಿನಿಮಾಗಳ ಬಗ್ಗೆ ಮಾಹಿತಿ ತುಂಬೋದನ್ನು ಬಿಡದೇ ಇದ್ದಲ್ಲಿ TV9 (ನ್ನು ಕರ್ನಾಟಕದಿಂದ ಹೊರಹಾಕಿ) ಗೆ ಕೊಟ್ಟಿರುವ ಹಕ್ಕನ್ನು ಸರಕಾರ ಮರುಪರಿಶೀಲಿಸಿ, ಹಕ್ಕನ್ನು ಹಿಂಪಡೆಯಬೇಕು.
೩) ಕನ್ನಡ ಸ್ಪಸ್ಟವಾಗಿ ಮಾತಾಡಿ, ನಡೆ, ನುಡಿ ಮತ್ತು ಮನಸ್ಸಿನಿಂದ ಕನ್ನಡತನವಿರದ ನಾಯಕರನ್ನು ಆರಿಸಬೇಡಿ. ಅಂತವರಿಗೆ ಕನ್ನಡದ ಬಗೆಗೆ ಒಲವಾಗಲಿ, ಕನ್ನಡದ ಕಲೆ, ಸಾಹಿತ್ಯ ಭಾಂಡಾರಗಳ ಅರಿವಾಗಲಿ ಇರುವದಿಲ್ಲ. ಅಂತವರನ್ನು ಗುರುತಿಸಿ, ಅವರಿಗೆ ವೋಟು ನಿಡಬೇಡಿ.
ಕರ್ನಾಟಕದಲ್ಲಿ ಕನ್ನಡ ಬೆಳಗಬೇಕು, ಇಲ್ಲಿ ಕನ್ನಡ ದೀಪ ಸದಾ ಬೆಳಗುವಂತೆ ನೋಡಿಕೊಳ್ಳಬೇಕಿರುವರು, ಪ್ರತಿಯೋರ್ವ ಕನ್ನಡಿಗನ ಹೊಣೆ.
ಇದಕ್ಕೆ ಕಾರಣಗಳು:
೧) ಜನ ಕನ್ನಡ ಬಿಟ್ಟು ಬೇರೆ ನುಡಿಯ ಸಿನಿಮಾ ನೋಡದೇ ಇರುವ ಕಡೆಗಳಲ್ಲೆಲ್ಲಾ, ತೆಲುಗು ಸಿನಿಮಾಗಳು ತೆರೆ ಕಾಣುತ್ತಿವೆ. ಹುಬ್ಬಳ್ಳಿ, ಬೆಳಗಾವಿ, ಜಮಖಂಡಿಯಂತ ಕಡೆ ಮೊದಲೆಲ್ಲ ಅಂದರೆ ಬರೀ ೩-೪ ವರುಷಗಳ ಹಿಂದಸ್ಟೇ, ಕನ್ನಡ ಬಿಟ್ಟರೆ ಹಿಂದಿ ಸಿನಿಮಾಗಳಸ್ಟೇ ತೆರೆ ಕಾಣುತ್ತಿದ್ದುದು, ಈಗ ಅಲ್ಲೆಲ್ಲ ತೆಲುಗು ಸಿನಿಮಾಗಳು ತೆರೆ ಕಾಣುತ್ತಿವೆ.
೨) ತೆಲುಗಿನ ಕನ್ನಡ News ಚಾನೆಲ್ TV9, ಈಗಂತೂ ಇನ್ನಿಲ್ಲದಂತೆ ಒತ್ತಿ ಒತ್ತಿ, ತೆಲುಗು ಸಿನಿಮಾಗಳ ಬಗೆಗೆ, ಹೆಜ್ಜೆ ಹೆಜ್ಜೆಗೂ ಮಾಹಿತಿ ಕೊಡತೊಡಗಿದ್ದಾರೆ. ಅಲ್ಲಿನ ಯಾವುದೋ ಜೂನಿಯರ್ ನಟ ಹೂಂಸು ಬಿಟ್ಟರೂ ಕರ್ನಾಟಕದ ನಂಬರ್ ೧ ಸುದ್ದಿ ಚಾನೆಲ್ ಅನ್ನಿಸಿಕೊಂಡಿರುವ TV9 ನಲ್ಲಿ ದೊಡ್ಡ ಸುದ್ದಿ. ಕನ್ನಡದ ದೊಡ್ಡ ಬ್ಯಾನರ್ ಸಿನಿಮಾ ಸುದ್ದಿನೂ ಅದರ ಮುಂದೆ ಸಪ್ಪೆ ಸಪ್ಪೆ!!!! ಇದನ್ನು ಕೇಳುವವರೇ ಇಲ್ಲವೇನೋ :-(
೩) ಕರ್ನಾಟಕದ ರಾಜಕೀಯದಲ್ಲಿ ತೆಲುಗರ ಕೈ ದೊಡ್ಡದಾಗಿದೆ. ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕ್ರಿಷ್ನದೇವರಾಯನ ಚಿತ್ರವನ್ನು ಮುದ್ರಿಸುವ ನಿರ್ಧಾರ ಒಂದು ದೊಡ್ಡ ಉದಾಹರಣೆ. ಕಾರಣ, ಕ್ರಿಷ್ನದೇವರಾಯ ಕನ್ನಡ, ತೆಲುಗು ಎರಡಕ್ಕೂ ಪ್ರಾಧನ್ಯತೆ ಕೊಟ್ಟಿದ್ದಕ್ಕೆ. ಆಗ ಕರ್ನಾಟಕ, AP ಒಂದೇ ಆಗಿತ್ತು, ಈಗ ಆಂದ್ರಗೆ ತೆಲುಗು ಇದೆ, ಕರ್ನಾಟಕದಲ್ಲಿ ಕನ್ನಡಕ್ಕೇ ಹಕ್ಕಿರುವದು, ಇದನ್ನು ಕಾಯ್ದಿರಿಸಿಕೊಳ್ಳುವ ಹೊಣೆ ಕನ್ನಡಿಗರದ್ದು. ರಾಜಕೀಯದ ವಿಚಾರದಲ್ಲಿ "ಕನ್ನಡ ಮಾತಾಡುವ ಪರ ಭಾಷಿಕ"ರನ್ನು ಗುರುತಿಸಿ, ಅವರನ್ನು ಎಲ್ಲಿಡಬೇಕೋ ಅಲ್ಲಿಡುವ ಹೊಣೆ ಕನ್ನಡಿಗರದ್ದು.
ಇದಕ್ಕೆ ಪರಿಹಾರಗಳು:
೧) ಕನ್ನಡಿಗರು ತೆಲುಗು/ತಮಿಳು ಸಿನಿಮಾಗಳನ್ನು ಸಿನಿಮಾಮಂದಿರಗಳಲ್ಲಿ ನೋಡುವದನ್ನು ಬಿಡಬೇಕು. ಕನ್ನಡ ಸಿನಿಮಾಗಳನ್ನು ಸಿನಿಮಾಮಂದಿರಗಳಲ್ಲಿ ನೋಡಿ, ಒಳ್ಳೆಯ ಕನ್ನಡ ಸಿನಿಮಾಗಳಿಗೆ ಬೆಂಬಲ ನೀಡಬೇಕು.
೨) TV9 ಗೆ ಕೊಟ್ಟಿರುವ ಹಕ್ಕನ್ನು ಸರಕಾರ ಹಿಂಪಡೆಯಬೇಕು. ತೆಲುಗು ಸಿನಿಮಾಗಳ ಬಗ್ಗೆ ಮಾಹಿತಿ ತುಂಬೋದನ್ನು ಬಿಡದೇ ಇದ್ದಲ್ಲಿ TV9 (ನ್ನು ಕರ್ನಾಟಕದಿಂದ ಹೊರಹಾಕಿ) ಗೆ ಕೊಟ್ಟಿರುವ ಹಕ್ಕನ್ನು ಸರಕಾರ ಮರುಪರಿಶೀಲಿಸಿ, ಹಕ್ಕನ್ನು ಹಿಂಪಡೆಯಬೇಕು.
೩) ಕನ್ನಡ ಸ್ಪಸ್ಟವಾಗಿ ಮಾತಾಡಿ, ನಡೆ, ನುಡಿ ಮತ್ತು ಮನಸ್ಸಿನಿಂದ ಕನ್ನಡತನವಿರದ ನಾಯಕರನ್ನು ಆರಿಸಬೇಡಿ. ಅಂತವರಿಗೆ ಕನ್ನಡದ ಬಗೆಗೆ ಒಲವಾಗಲಿ, ಕನ್ನಡದ ಕಲೆ, ಸಾಹಿತ್ಯ ಭಾಂಡಾರಗಳ ಅರಿವಾಗಲಿ ಇರುವದಿಲ್ಲ. ಅಂತವರನ್ನು ಗುರುತಿಸಿ, ಅವರಿಗೆ ವೋಟು ನಿಡಬೇಡಿ.
ಕರ್ನಾಟಕದಲ್ಲಿ ಕನ್ನಡ ಬೆಳಗಬೇಕು, ಇಲ್ಲಿ ಕನ್ನಡ ದೀಪ ಸದಾ ಬೆಳಗುವಂತೆ ನೋಡಿಕೊಳ್ಳಬೇಕಿರುವರು, ಪ್ರತಿಯೋರ್ವ ಕನ್ನಡಿಗನ ಹೊಣೆ.
Monday, February 25, 2008
ಸಕ್ಕತ್ತಾಗಿದೆ...
ಹಲೋ.. ಗೆಳೆಯರೇ... ಬ್ಲಾಗರ್-ನಲ್ಲಿ ಇದೀಗ ಡೈರೆಕ್ಟ್ ಆಗಿ ಟೈಪ್ ಮಾಡುತ್ತಿದ್ದೇನೆ... ಸಕ್ಕತ್....
Tuesday, October 03, 2006
ಧೀರ ದೊರೆ ಆರನೇ ವಿಕ್ಕರಮಾದಿತ್ತಯ(ಕಿ.ಶ ೧೦೭೬-೧೧೨೬)
ಆರನೇ ವಿಕ್ಕರಮಾದಿತ್ತಯ(ಕಿ.ಶ ೧೦೭೬-೧೧೨೬) :-
ಆರನೇ ವಿಕ್ಕರಮಾದಿತ್ತಯನು ಒಬ್ಬ ಬುದ್ದಿವಂತ ದೊರೆ ಅಲ್ಲದೇ ಧೀರ ಮತ್ತು ಬಲಶಾಲಿಯಾಗಿದ್ದನು. ಆತನಿಗೆ ದೊರೆತನಕ್ಕಿಂತ ಹೆಚ್ಚಾಗಿ ಜನರ ಮನಸ್ಸನ್ನು ಗೆಲ್ಲವುದು ಮುಕ್ಕೆಯಾಗಿತ್ತು. ಆತನು ಒಂದು ಹೊಸ ಶಕೆಯನ್ನು ಆರಂಬಿಸಿದನು. ಅವನಿಗೆ ಪರಮಾದಿದೇವ ಮತ್ತು ತ್ರಿಬುವನಮಲ್ಲ ಎಂಬ ಬಿರುದುಗಳಿದ್ದವು.
ಅವನ ಆಳುವಿಕೆಯಲ್ಲಿ ಬಿಲ್ಲಣ, ವಿದ್ನಾನೇಶವರ ಎಂಬ ಕವಿಗಳಿದ್ದರು. ಅವನ ತಮ್ಮ ಕೀರ್ತಿವರ್ಮನು ಗೋವೈದ್ದೆ ಎಂಬ ಹೊತ್ತಿಗೆಯನ್ನು ಬರೆದನು.
ಇಮ್ಮಡಿ ವಿಕ್ಕರಮಾದಿತ್ತಯ (ಕಿ.ಶ ೭೩೩-೭೪೪) :-
ಇಮ್ಮಡಿ ಪುಲಕೇಶಿಯ ಸಾವಿನ ಕಾಲದಲ್ಲಿ ಪಲ್ಲವ ದೊರೆಯು ವಾತಾಪಿಯನ್ನು ಮುತ್ತಿದ್ದರಿಂದ ವಾತಾಪಿಗೆ ಅಂಟಿದ್ದ ಕಳಂಕವನ್ನು ದಿಟ್ಟತನದಿಂದ ತೊಡೆದು ಹಾಕಿದವನು ಎರಡನೇ ವಿಕ್ಕರಮಾದಿತ್ತಯ. ಇಮ್ಮಡಿ ಪುಲಕೇಶಿಗೆ ಬಂದಿದ್ದ ಅವನಿಜನಾಶ್ರಯ ಎಂಬ ಬಿರುದು ಇಮ್ಮಡಿ ವಿಕ್ಕರಮಾದಿತ್ತಯನಿಗೂ ಬಂದಿತು.
ಈತನು ಪಲ್ಲವರನ್ನು ಅನೇಕ ಬಾರಿ ಸೋಲಿಸಿ, ನೆತ್ತರ ಹರಿಸದೇ ಈಗಿನ ತಮಿಳುನಾಡಿನಲ್ಲಿರುವ ಸೋಮೇಶನ ದೇವಾಲಯದ ಗೋಡೆಗಳ ಮೇಲೆ ಕನ್ನಡದಲ್ಲಿ ಶಾಸನಗಳನ್ನು ಬರೆಸಿದನು, ಇಮ್ಮಡಿ ವಿಕ್ಕರಮಾದಿತ್ತಯ.
Thursday, September 28, 2006
ಅಪ್ಪಟ ಕನ್ನಡ ನೆಲ 'ಬೆಳಗಾವಿ'
ಎಮ್.ಈ.ಎಸ್ ಎಂಬ ಪಾರಟಿಯವರು ಹಬ್ಬಿಸಲು ನೋಡುತ್ತಿರುವುದೇನೆಂದರೆ ಬೆಳಗಾವಿ ಮೊದಲಿಂದಲು ಮರಾಟಿಗರದು, ಅಲ್ಲಿ ಮೊದಲಿಂದಲೂ ಮರಾಟಿಗರು ನೆಲೆಸಿದ್ದರೆಂದು. ಅಪ್ಪಟ ಸುಳ್ಳು ಹೇಳಿಕೊಂಡು ಮಂದಿಯನ್ನು ನಂಬಿಸಿ, ಅನ್ನೆದಿಂದ ಬೆಳಗಾವಿಯನ್ನು ಮಹಾರಾಸ್ಟರಕ್ಕೆ ಸೇರಿಸಲು ನೋಡುತ್ತಿದ್ದಾರೆ.
http://www.dailypioneer.com/indexn12.asp?main_variable=VOTE_2004&file_name=vote364.txt&counter_img=364
ಮೇಲಿನ ಕೊಂಡಿಯಂತೆ ಬೆಳಗಾವಿಯಿಂದ ಬರೀ ಹತ್ತೇ ಕಿಲೋಮೀಟರ್ ಇರುವ 'ಯಲ್ಲೂರು' ಎಂಬಲ್ಲಿ ಸೇ ೯೫% ಮಂದಿ ಮರಾಟಿಯವರಂತೆ. ಇದಕ್ಕೆ ಕಾರಣ ಮರಾಟಿಗರ ದಬ್ಬಾಳಿಕೆ. ಯಲ್ಲೂರು ಇದು ಅಪ್ಪಟ ಕನ್ನಡ ಊರಿನ ಹೆಸರು, ಅಲ್ಲಿರುವ ೯೫% ಸೇಕಡಾ ಮಂದಿ ಮರಾಟಿಯಂತೆ ಎಂತ ನೋವಿನ ಸಂಗತಿಯಲ್ಲವೇ?
ಕರುನಾಡಿಂದ ಮೀರಜಿಗೆ ಬಹಳ ಕನ್ನಡಿಗರು ಆರೋಗ್ಗೆ ತಪಾಸಣೆಗಾಗಿ ತೆರಳುತ್ತಾರೆ, ಅಲ್ಲಿ ಕನ್ನಡಿಗರನ್ನು ಸರಿಯಾಗಿ ಕಾಣುವುದಿಲ್ಲ.
"ಬೆಳಗಾವಿ" ಇದು ಕೂಡ ಅಪ್ಪಟ ಕನ್ನಡ ಪದ. "ಬೆಳ" ಎಂದರೆ ಬಿಳಿ. ಬೆಳ್ಳಕ್ಕಿ ಪದ ನೋಡಿ. ಬೆಳ್ಳನೆ ಹಕ್ಕಿ = ಬೆಳ್ಳಕ್ಕಿ
ಬೆಳಗೊಳ, ಬೆಳಗಲಿ ಇತರ ಮಾದರಿಗಳು. ಎರಡನೆಯದು "ಗಾವಿ". http://kannadakasturi.com ಇಲ್ಲಿ ಕೊಟ್ಟಿರುವಂತೆ "ಗಾವಿಲ" ಅಂದರೆ ಹಳ್ಳಿಯವ. "ಗಾವಿ" ಎಂದರೆ ಹಳ್ಳಿ. ಹಾಗಾಗಿ 'ಬೆಳಗಾವಿ' ಎಂದರೆ 'ಬಿಳಿಹಳ್ಳಿ'. ಒಂದು ಕಾಲದಲ್ಲಿ ಇದು ಬಿಳಿ ಮಲ್ಲಿಗೆಗೆ ಹೆಸರುವಾಸಿಯಾಗಿದ್ದರಿಂದ ಈ ಹೆಸರು ಬಂದಿರಬೇಕು.
ಇತರ ಮಾದರಿಗಳು ಸೊರಗಾವಿ, ಸಿಗ್ಗಾವಿ.
ಈ ಬಗ್ಗೆ ಇಲ್ಲಿ ಮಾತುಕತೆಯಿದೆ ನೋಡಿ
http://listserv.linguistlist.org/cgi-bin/wa?A2=ind9805&L=indology&D=0&P=7931&F=P
ಅಪ್ಪಟ ಕನ್ನಡ ನಾಡು ಬೆಳಗಾವಿ ಅದು ಎಂದಿದ್ದರೂ ಕರುನಾಡಿಗೆ ಸೇರಬೇಕು.
http://www.dailypioneer.com/indexn12.asp?main_variable=VOTE_2004&file_name=vote364.txt&counter_img=364
ಮೇಲಿನ ಕೊಂಡಿಯಂತೆ ಬೆಳಗಾವಿಯಿಂದ ಬರೀ ಹತ್ತೇ ಕಿಲೋಮೀಟರ್ ಇರುವ 'ಯಲ್ಲೂರು' ಎಂಬಲ್ಲಿ ಸೇ ೯೫% ಮಂದಿ ಮರಾಟಿಯವರಂತೆ. ಇದಕ್ಕೆ ಕಾರಣ ಮರಾಟಿಗರ ದಬ್ಬಾಳಿಕೆ. ಯಲ್ಲೂರು ಇದು ಅಪ್ಪಟ ಕನ್ನಡ ಊರಿನ ಹೆಸರು, ಅಲ್ಲಿರುವ ೯೫% ಸೇಕಡಾ ಮಂದಿ ಮರಾಟಿಯಂತೆ ಎಂತ ನೋವಿನ ಸಂಗತಿಯಲ್ಲವೇ?
ಕರುನಾಡಿಂದ ಮೀರಜಿಗೆ ಬಹಳ ಕನ್ನಡಿಗರು ಆರೋಗ್ಗೆ ತಪಾಸಣೆಗಾಗಿ ತೆರಳುತ್ತಾರೆ, ಅಲ್ಲಿ ಕನ್ನಡಿಗರನ್ನು ಸರಿಯಾಗಿ ಕಾಣುವುದಿಲ್ಲ.
"ಬೆಳಗಾವಿ" ಇದು ಕೂಡ ಅಪ್ಪಟ ಕನ್ನಡ ಪದ. "ಬೆಳ" ಎಂದರೆ ಬಿಳಿ. ಬೆಳ್ಳಕ್ಕಿ ಪದ ನೋಡಿ. ಬೆಳ್ಳನೆ ಹಕ್ಕಿ = ಬೆಳ್ಳಕ್ಕಿ
ಬೆಳಗೊಳ, ಬೆಳಗಲಿ ಇತರ ಮಾದರಿಗಳು. ಎರಡನೆಯದು "ಗಾವಿ". http://kannadakasturi.com ಇಲ್ಲಿ ಕೊಟ್ಟಿರುವಂತೆ "ಗಾವಿಲ" ಅಂದರೆ ಹಳ್ಳಿಯವ. "ಗಾವಿ" ಎಂದರೆ ಹಳ್ಳಿ. ಹಾಗಾಗಿ 'ಬೆಳಗಾವಿ' ಎಂದರೆ 'ಬಿಳಿಹಳ್ಳಿ'. ಒಂದು ಕಾಲದಲ್ಲಿ ಇದು ಬಿಳಿ ಮಲ್ಲಿಗೆಗೆ ಹೆಸರುವಾಸಿಯಾಗಿದ್ದರಿಂದ ಈ ಹೆಸರು ಬಂದಿರಬೇಕು.
ಇತರ ಮಾದರಿಗಳು ಸೊರಗಾವಿ, ಸಿಗ್ಗಾವಿ.
ಈ ಬಗ್ಗೆ ಇಲ್ಲಿ ಮಾತುಕತೆಯಿದೆ ನೋಡಿ
http://listserv.linguistlist.org/cgi-bin/wa?A2=ind9805&L=indology&D=0&P=7931&F=P
ಅಪ್ಪಟ ಕನ್ನಡ ನಾಡು ಬೆಳಗಾವಿ ಅದು ಎಂದಿದ್ದರೂ ಕರುನಾಡಿಗೆ ಸೇರಬೇಕು.
Thursday, September 14, 2006
ಇಸುವಿನ ಬಳಕೆಯ ಬಗ್ಗೆ
ಇದು ಇನ್ನೂ ಮುಕ್ಕೆಯಾದ ಇಚಾರ
ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ,
ಮಾಡು - ನಾನು ಮಾಡುವುದು.
ಮಾಡಿಸು - ಎರಡನೆಯವರು ಮಾಡುವಂತೆ ಮಾಡುವುದು.
ಮಾಡಿಸಿಸು - ಎರಡನೆಯವರು ಮೂರನೆಯವರಿಂದ ಮಾಡಿಸುವಂತೆ ಮಾಡುವುದು.
ಇದರಿಂದ ನಮಗೆ ಮೂರು ಹೆಸರುಪದಳು ಸಿಗುತ್ತವೆ. ಮಾಡುವಿಕೆ,ಮಾಡಿಸುವಿಕೆ,ಮಾಡಿಸಿಸುವಿಕೆ.
ಹಾಗೆಯೇ,
ಕೇಳು - ಮೊದಲ ಪುರುಸ ಕೇಳುವುದು. ಮಾದರಿ: ನಾನು ಗುರುಗಳನ್ನು ಕೇಳಿದೆನು
ಕೇಳಿಸು - ಎರಡನೆಯವರು ಕೇಳುವಂತೆ ಮಾಡುವುದು ;ನಾನು ರವಿಯ ಕಡೆಯಿಂದ ಗುರುಗಳನ್ನು ಕೇಳಿಸಿದೆನು
ಕೇಳಿಸಿಸು - ಎರಡನೆಯವರು ಮೂರನೆಯವರಿಂದ ಕೇಳಿಸುವಂತೆ ಮಾಡುವುದು. ;ನಾನು ರವಿಗೆ ಹೇಳಿ, ರಾಮನ ಕಡೆಯಿಂದ ಗುರುಗಳನ್ನು ಕೇಳಿಸಿಸಿದೆನು.
'ಪ್ರಶ್ನೆ' ಈ ಪದವು ಸಕ್ಕದದ 'ಪ್ರಶ್ನಾ' ದಿಂದ ಬಂದದ್ದು. ಇದಕ್ಕೆ ಇಸು ಸೇರಿಸಿ 'ಪ್ರಶ್ನಿಸು' ಮಾಡಿದ್ದೇವೆ.
ಕೇಳು - ಪ್ರಶ್ನೆ ಮಾಡು - ಪ್ರಶ್ನಿಸು
ಕೇಳಿಸು - ಪ್ರಶ್ನಿಸಿಸು.
ಕೇಳಿಸಿಸು - ?
ಕೇಳು ಎಂಬ ಪದವನ್ನು ಬಿಟ್ಟು ನಾವು 'ಪ್ರಶ್ನಿಸು' ಎಂದು ಬಳಕೆ ಮಾಡುತ್ತಾ ಹೋದರೆ, ಕೇಳಿಸಿಸು ಎಂಬ ಪದ ತನ್ನ ತಿಳಿವನ್ನು ಕಳೆದುಕೊಂಡು ಸಾಯುತ್ತದೆ. ಇದರಿಂದ ಸರಳವಾಗಿ ಹೇಳಬಹುದಾದನ್ನು ಕನ್ನಡದಲ್ಲಿ ಹೇಳಲು ಕಟಿಣವಾಗಿ ತೋರತೊಡಗುತ್ತದೆ.ಹೀಗೆಯೇ ಏಸೋ ಪದಗಳು ಕಳೆದೇ ಹೋಗಿವೆ. ಪದಗಳು ಕಳೆಯತೊಡಗಿದರೆ ನುಡಿಯೂ ಕಳೆಯತೊಡಗಿದಂತೆಯೇ.
ಸಕ್ಕದವು ತೇಟ್ ಈಗ ಇಂಗಲೀಸು ಸೇರಿಕೊಳ್ಳುತ್ತಿರುವಂತೆಯೇ ಆಗ ಬರಹದಲ್ಲಿ ಸೇರಿಕೊಂಡಿರುವುದು ತಿಳಿಯುತ್ತದೆ.
ಅಪ್ಪಿಕೊ - ಆಲಿಂಗನ ಮಾಡು - ಆಲಿಂಗಿಸು - ಹಗ್(hug) ಮಾಡು - ಹಗ್ಗಿಸು?
'ಪ್ರಯತ್ನಿಸು' ಎಂಬುದಕ್ಕಿಂತ 'try ಮಾಡು' ಎಂಬುದೇ ಬೇಗರಣಬದ್ದವಾಗಿದೆ. ಇಲ್ಲವೇ ಕನ್ನಡದಲ್ಲಿಯೇ ಹೇಳಬೇಕೆಂದವರು "ಆಗುತ್ತಾದಾ ನೋಡಬೇಕು' ಇಲ್ಲವೇ 'ಗುದ್ದಾಡಬೇಕು' ಹೀಗೆ ಸರಿಯಾಗಿ ಆಡುತ್ತಾರೆ. ಇನ್ನು ಮೇಲಾದರೂ ಕನ್ನಡದಲ್ಲಿ ಸರಿಯಾಗಿ ಬರೆಯುವ ಮನಸ್ಸು ಬರಹಗಾರರಲ್ಲಿ ಮೂಡೀತೆ? ( ಪೇಪರಿನೋರು, ಕಾದಂಬರಿಕಾರರು, ಬಲಾಗಿಗಳು, ಕತೆಗಾರರು, ಟಿ.ವಿ.ಗಳಲ್ಲಿ ಸುದ್ದಿ ಓದುವವರು, ಮತ್ತು ಸರಿಯಾದ ಕನ್ನಡವನ್ನು ಬಳಕೆಗೆ ತರಬೇಕೆಂಬ ಹಂಬಲ ಇರುವವರು, ಸಕಲ ಕನ್ನಡಿಗರನ್ನೂ,ನನ್ನನ್ನೂ ಸೇರಿಸಿಕೊಂಡು).
ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ,
ಮಾಡು - ನಾನು ಮಾಡುವುದು.
ಮಾಡಿಸು - ಎರಡನೆಯವರು ಮಾಡುವಂತೆ ಮಾಡುವುದು.
ಮಾಡಿಸಿಸು - ಎರಡನೆಯವರು ಮೂರನೆಯವರಿಂದ ಮಾಡಿಸುವಂತೆ ಮಾಡುವುದು.
ಇದರಿಂದ ನಮಗೆ ಮೂರು ಹೆಸರುಪದಳು ಸಿಗುತ್ತವೆ. ಮಾಡುವಿಕೆ,ಮಾಡಿಸುವಿಕೆ,ಮಾಡಿಸಿಸುವಿಕೆ.
ಹಾಗೆಯೇ,
ಕೇಳು - ಮೊದಲ ಪುರುಸ ಕೇಳುವುದು. ಮಾದರಿ: ನಾನು ಗುರುಗಳನ್ನು ಕೇಳಿದೆನು
ಕೇಳಿಸು - ಎರಡನೆಯವರು ಕೇಳುವಂತೆ ಮಾಡುವುದು ;ನಾನು ರವಿಯ ಕಡೆಯಿಂದ ಗುರುಗಳನ್ನು ಕೇಳಿಸಿದೆನು
ಕೇಳಿಸಿಸು - ಎರಡನೆಯವರು ಮೂರನೆಯವರಿಂದ ಕೇಳಿಸುವಂತೆ ಮಾಡುವುದು. ;ನಾನು ರವಿಗೆ ಹೇಳಿ, ರಾಮನ ಕಡೆಯಿಂದ ಗುರುಗಳನ್ನು ಕೇಳಿಸಿಸಿದೆನು.
'ಪ್ರಶ್ನೆ' ಈ ಪದವು ಸಕ್ಕದದ 'ಪ್ರಶ್ನಾ' ದಿಂದ ಬಂದದ್ದು. ಇದಕ್ಕೆ ಇಸು ಸೇರಿಸಿ 'ಪ್ರಶ್ನಿಸು' ಮಾಡಿದ್ದೇವೆ.
ಕೇಳು - ಪ್ರಶ್ನೆ ಮಾಡು - ಪ್ರಶ್ನಿಸು
ಕೇಳಿಸು - ಪ್ರಶ್ನಿಸಿಸು.
ಕೇಳಿಸಿಸು - ?
ಕೇಳು ಎಂಬ ಪದವನ್ನು ಬಿಟ್ಟು ನಾವು 'ಪ್ರಶ್ನಿಸು' ಎಂದು ಬಳಕೆ ಮಾಡುತ್ತಾ ಹೋದರೆ, ಕೇಳಿಸಿಸು ಎಂಬ ಪದ ತನ್ನ ತಿಳಿವನ್ನು ಕಳೆದುಕೊಂಡು ಸಾಯುತ್ತದೆ. ಇದರಿಂದ ಸರಳವಾಗಿ ಹೇಳಬಹುದಾದನ್ನು ಕನ್ನಡದಲ್ಲಿ ಹೇಳಲು ಕಟಿಣವಾಗಿ ತೋರತೊಡಗುತ್ತದೆ.ಹೀಗೆಯೇ ಏಸೋ ಪದಗಳು ಕಳೆದೇ ಹೋಗಿವೆ. ಪದಗಳು ಕಳೆಯತೊಡಗಿದರೆ ನುಡಿಯೂ ಕಳೆಯತೊಡಗಿದಂತೆಯೇ.
ಸಕ್ಕದವು ತೇಟ್ ಈಗ ಇಂಗಲೀಸು ಸೇರಿಕೊಳ್ಳುತ್ತಿರುವಂತೆಯೇ ಆಗ ಬರಹದಲ್ಲಿ ಸೇರಿಕೊಂಡಿರುವುದು ತಿಳಿಯುತ್ತದೆ.
ಅಪ್ಪಿಕೊ - ಆಲಿಂಗನ ಮಾಡು - ಆಲಿಂಗಿಸು - ಹಗ್(hug) ಮಾಡು - ಹಗ್ಗಿಸು?
'ಪ್ರಯತ್ನಿಸು' ಎಂಬುದಕ್ಕಿಂತ 'try ಮಾಡು' ಎಂಬುದೇ ಬೇಗರಣಬದ್ದವಾಗಿದೆ. ಇಲ್ಲವೇ ಕನ್ನಡದಲ್ಲಿಯೇ ಹೇಳಬೇಕೆಂದವರು "ಆಗುತ್ತಾದಾ ನೋಡಬೇಕು' ಇಲ್ಲವೇ 'ಗುದ್ದಾಡಬೇಕು' ಹೀಗೆ ಸರಿಯಾಗಿ ಆಡುತ್ತಾರೆ. ಇನ್ನು ಮೇಲಾದರೂ ಕನ್ನಡದಲ್ಲಿ ಸರಿಯಾಗಿ ಬರೆಯುವ ಮನಸ್ಸು ಬರಹಗಾರರಲ್ಲಿ ಮೂಡೀತೆ? ( ಪೇಪರಿನೋರು, ಕಾದಂಬರಿಕಾರರು, ಬಲಾಗಿಗಳು, ಕತೆಗಾರರು, ಟಿ.ವಿ.ಗಳಲ್ಲಿ ಸುದ್ದಿ ಓದುವವರು, ಮತ್ತು ಸರಿಯಾದ ಕನ್ನಡವನ್ನು ಬಳಕೆಗೆ ತರಬೇಕೆಂಬ ಹಂಬಲ ಇರುವವರು, ಸಕಲ ಕನ್ನಡಿಗರನ್ನೂ,ನನ್ನನ್ನೂ ಸೇರಿಸಿಕೊಂಡು).
Wednesday, September 06, 2006
ಬದುಕೆಂಬ ಬದುಕು
ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದು
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ
ಇವೊತ್ತು ಜೋಳದ ರೊಟ್ಟಿ ಇಲ್ಲಂದರ
ಚಪಾತಿ ತಿಂದ ಆರಾsಮಿರು
ಗೆಳೆಯಾರಾರು ಸಿಗಲಿಲ್ಲಂದರ
ಟಿ.ವಿ. ನೋಡಕೊಂಡ್ ಆರಾsಮಿರು
ಜಿಮ್ಮಿಗೆ ಹೋಗುದಾಗಲಿಲ್ಲಂದರ
ಒಂದೆರಡ ಹೆಜ್ಜಿ ನಡsದ ಆರಾsಮಿರು
MBA ಮಾಡಬೇಕು ಅನ್ನಕೊಂಡಿದ್ದಿ
S/W ನಾಗs ಆರಾsಮಿರು
ಮನಿಗೆ ಹೋಗುದಾಗಲಿಲ್ಲಂದರ
ಪೋನಿನಾಗ ಮಾತಾಡಿ ಆರಾsಮಿರು
ಯಾರನೋ ನೋಡುದು ಆಗಲಿಲ್ಲಂದರ
ಅವರ ದನಿ ಕೇಳಿ ಆರಾsಮಿರು
ನಿನ್ನೆಂಬುದು ಕಳೆದು ಹೋಗೇತಿ
ಒಳ್ಳೆಯದರ ನೆನಪಿನಾsಗ ಆರಾsಮಿರು
ನಾಳೆ ಹೆಂಗೈತೋ ಗೊತ್ತಿಲ್ಲ
ಕನಸಿನಾಗs ಆರಾsಮಿರು
ನಿನ್ನೆ ನಾಳಿ ಚಿಂತಿ ಮರೆತು
ಇಂದಿನದೊಳಗs ಆರಾsಮಿರು
ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದು
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ
ಇವೊತ್ತು ಜೋಳದ ರೊಟ್ಟಿ ಇಲ್ಲಂದರ
ಚಪಾತಿ ತಿಂದ ಆರಾsಮಿರು
ಗೆಳೆಯಾರಾರು ಸಿಗಲಿಲ್ಲಂದರ
ಟಿ.ವಿ. ನೋಡಕೊಂಡ್ ಆರಾsಮಿರು
ಜಿಮ್ಮಿಗೆ ಹೋಗುದಾಗಲಿಲ್ಲಂದರ
ಒಂದೆರಡ ಹೆಜ್ಜಿ ನಡsದ ಆರಾsಮಿರು
MBA ಮಾಡಬೇಕು ಅನ್ನಕೊಂಡಿದ್ದಿ
S/W ನಾಗs ಆರಾsಮಿರು
ಮನಿಗೆ ಹೋಗುದಾಗಲಿಲ್ಲಂದರ
ಪೋನಿನಾಗ ಮಾತಾಡಿ ಆರಾsಮಿರು
ಯಾರನೋ ನೋಡುದು ಆಗಲಿಲ್ಲಂದರ
ಅವರ ದನಿ ಕೇಳಿ ಆರಾsಮಿರು
ನಿನ್ನೆಂಬುದು ಕಳೆದು ಹೋಗೇತಿ
ಒಳ್ಳೆಯದರ ನೆನಪಿನಾsಗ ಆರಾsಮಿರು
ನಾಳೆ ಹೆಂಗೈತೋ ಗೊತ್ತಿಲ್ಲ
ಕನಸಿನಾಗs ಆರಾsಮಿರು
ನಿನ್ನೆ ನಾಳಿ ಚಿಂತಿ ಮರೆತು
ಇಂದಿನದೊಳಗs ಆರಾsಮಿರು
ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದು
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ
Sunday, August 27, 2006
ಕನ್ನಡ ಬೇಗರಣ ಕಟ್ಟಳೆಗಳು
ಈ ಕೆಳಗಿನ ಇಚಾರವನ್ನು, ದಯಮಾಡಿ ಗಮನವಿಟ್ಟು ಓದಿರಿ, ಇದರಲ್ಲಿ ತಪ್ಪು ಕಂಡರೆ, ತಿಳಿಸಿ.
ಕನ್ನಡದ ನಿಜ ಅಕ್ಕರಪಟ್ಟಿ :-
ದನಿಗಳು :- ಅ,ಆ,ಇ,ಈ,ಉ,ಊ,ಎ,ಏ,ಐ,ಒ,ಓ,ಔ,ಅಂ
ಬೆಂಜನಗಳು :-
ಕ, ಗ, ಙ
ಚ, ಜ, ಞ
ಟ, ಡ, ಣ
ತ, ದ, ನ
ಪ, ಬ, ಮ
ಯ, ರ, ಲ, ವ, ಸ, ಹ, ಳ
ಕಟ್ಟಳೆಗಳು
ಒತ್ತಕ್ಕರ ಕಟ್ಟಳೆ :- ಒತ್ತು+ಅಕ್ಕರ ( ಒತ್ತು ಅಕ್ಷರ ). ಅಂದರೆ ಕನ್ನಡದಲ್ಲಿ ಒಂದು ಅಕ್ಕರವನ್ನು ಒತ್ತಿ ಹೇಳುವದನ್ನು, ಬರೆಯುವಾಗ, ಆ ಅಕ್ಕರದ ಕೆಳಗೆ ಅದೇ ಅಕ್ಕರವನ್ನು ಬರೆಯಲಾಗುತ್ತದೆ.
ಉದಾ: ಕಲ್ಲು, ಮುಳ್ಳು, ಸುಳ್ಳು, ಅಕ್ಕರೆ, ಸಕ್ಕರೆ, ಅಗ್ಗ, ಹಿಗ್ಗು, ಸುಗ್ಗಿ, ನುಗ್ಗು, ಪಕ್ಕ, ಚುಕ್ಕ ಹೀಗೆ ಹಲವಾರು.ಪೊಳ್ಳು, ಗೊಳ್ಳು, ಗೊಡ್ಡು, ಮುತ್ತು, ಸುತ್ತು, ತುತ್ತು, ಕತ್ತು, ಕುತ್ತು, ಸೊತ್ತು. ಬಹಳ ಇವೆ.
ಕಟ್ಟಳೆಯ ಉಲ್ಲಂಗನೆ :- ಒತ್ತಕ್ಕರ ಎಂಬ ಪದದಲ್ಲಿಯೇ 'ಒತ್ತು' ಇದೆ. ಅಂದರೆ ಆ ಅಕ್ಕರವನ್ನು ಒತ್ತಿ ಹೇಳುವುದು. ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರವನ್ನು ಬರೆದರೆ(ಉದಾ: ಪ್ರ), ಅದು ಬೆರಕೆಯಾಗುತ್ತದೆ, ಒತ್ತಕ್ಕರ ಹೇಗಾಗುತ್ತದೆ? ಇದರಲ್ಲಿ ತಪ್ಪಿದ್ದಲ್ಲಿ ತಿಳಿಸಿ.
ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ ಇರುವ ಪದಗಳೆಲ್ಲವೂ ಹೊರಗಿನವೇ ಆಗಿವೆ. ಉದಾ: ಪತ್ರ, ಚಿತ್ರ, ಪಾತ್ರ, ವಿನಮ್ರ, ವಿಕ್ರಮ, ವಿಕ್ರಯ, ಹೀಗೆ ಬಹಳ ಪದಗಳು. ಈ ಪದಗಳು ಕನ್ನಡಿಗರಿಗೆ ಹೊಂದಿಲ್ಲ. ಟಪಾಲು, ಕಾಗದ(ಕಾಗಜ್ ನಿಂದ ಬಂದದ್ದು), ಇಂತವು ಹೊರಗಿನವಾದರೂ ಒತ್ತಕ್ಕರದ ಕಟ್ಟಳೆ ಕಾಪಾಡುವದರಿಂದ ಅವು ಬಲು ಬೇಗ ಕನ್ನಡದ ಪದಗಳಾಗಿವೆ.
ಒಂದು ಉದಾಹರಣೆ: ಡಾ.ರಾಜಣ್ಣರ 'ಬಂಗಾರದ ಪಂಜರ' ಸಿನಿಮಾ ನೀವು ಒಮ್ಮೆ ನೋಡಿರಿ, ಅದರಲ್ಲಿ ಬರುವ ಒಂದು ಸೀನಿನಲ್ಲಿ, ಬೀರ(ರಾಜಣ್ಣ) ಅವನ ತಮ್ಮನ ಜೊತೆ 'ಕ್ಲಬ್' ಗೆ ಹೋಗಿರುತ್ತಾನೆ. ಮರುದಿನ ಅವರ ಅಪ್ಪ(ಲೋಕನಾತ್) 'ನಿನ್ನೆ ರಾತ್ರಿ ಎಲ್ಲಿಗೆ ಹೋಗಿದ್ದೆ' ಅಂತ ಕೇಳುತ್ತಾನೆ, ಅದಕ್ಕೆ ಬೀರ " ದಾಡಿ(ಡ್ಯಾಡಿ) ನಾನು, 'ಕಿಲುಬಿ'ಗೆ ಹೋಗಿದ್ದೆ " ಅನ್ನುತಾನೆ. 'ಅಶಿಕ್ಷಿತನಾದ' ಬೀರ 'ಕ್ಲಬ್' ನ್ನು ಕಿಲುಬು ಮಾಡಿ ತನ್ನ ಪದವಾಗಿಸಿಕೊಳ್ಳುತ್ತಾನೆ. 'ಸುಶಿಕ್ಷಿತನಾದ' ಅವರ ಅಪ್ಪ ಅದನ್ನು 'ಕ್ಲಬ್' ಎಂದು ತಿದ್ದುತ್ತಾನೆ. :-(
'I was born intelligent, but education ruined me' ಅಂತಾರಲ್ಲ ಹಾಗೆ.
'ಕ್ಲಬ್' ಎಂದು ಬರೆಯುವಲ್ಲಿ ಒತ್ತಕ್ಕರದ ಕಟ್ಟಳೆ ಉಲ್ಲಂಗನೆಯಾಗುವದರಿಂದ ಅದು ಹೊರಗಿನ ಪದವಾಗೇ ಉಳಿಯುತ್ತದೆ. ಅದು 'ಕಲಬು' ಆದರೆ ಅಲಗು, ಮುಲುಕು, ಮೆಲುಕು ಹೀಗೆ ಹಲವಾರು ಪದಗಳಂತೆಯೇ ಇರುವದರಿಂದ ಬಹು ಬೇಗ ಕನ್ನಡ ಪದವಾಗುತ್ತದೆ.
ಹೀಗೆ, ಒಂದು ಅಕ್ಕರದಡಿ ಇನ್ನೊಂದು ಅಕ್ಕರ ಬರುವ ಯಾವುದೇ ಪದ ತೆಗೆದುಕೊಳ್ಳಿ, ಅದನ್ನವರು ನಿಯಮಾನುಸಾರ ತಿದ್ದಿಯೇ ಆಡುತ್ತಾರೆ. ಉದಾ; ಬರಹದಲ್ಲಿ ಬಹಳ ಸಾಮಾನಿಯಾಗಿ(ಸಾಮಾ 'ನ್ಯ' ವಾಗಿ) ಬಳಸುವ 'ಪ್ರಾಣ' ತೆಗೆದುಕೊಳ್ಳಿ, ಅದನ್ನವರು 'ಪಿರಾಣ', ಇಲ್ಲವೇ 'ಪರಾಣ' ಎನ್ನುತ್ತಾರೆ. 'ರಾತ್ರಿ' ಎಂಬುದನ್ನು 'ರಾತರಿ' ಎನ್ನುತ್ತಾರೆ. 'ಚಿತ್ರ' - ಚಿತ್ತಾರ. 'ಸ್ವಚ್ಛ' - ಸೊಚ್ಚ. ಸ್ವಲ್ಪ - ಸೊಲುಪ. ಇಂತಹ ಎಲ್ಲ ಬೆರಕೆ ಪದಗಳು.
ಈಗ ಹೇಳಿ, ಯಾರು ಕಲಿತವರು(ಸುಶಿಕ್ಷಿತರು), ನಾವಾ? ಹಳ್ಳಿಗರಾ?
ಒಂದು ವಿವರಣೆ :- ಬರವಣಿಗೆಯಲ್ಲಿ 'ಬರುತ್ತೀರಾ?' ಎಂದು ನಾವು ಬರೆಯುತ್ತೇವೆ. ಅದನ್ನು ಆಡುವಾಗ 'ಬರ್ತೀರಾ?' ಆಗುತ್ತದೆ. 'ನುಡಿ ಸೊಚ್ಚತೆ ಮತ್ತು ಬರಹದ ಸೊಚ್ಚತೆ' ಬೇರೆ, ಬೇರೆ(OLN ರ 'ಮಡಿ ಭಾಷೆ,ಮಡಿ ಭಾಷೆ' ಬಲಾಗ ನೋಡಿ) ಎಂದು ಹೇಳುವುದನ್ನು, ಈ ಬೆಳಕಿನಲ್ಲಿ ನೋಡಿದಾಗ ಅದು ಸರಿ ಎನ್ನಬಹುದು. 'ಬರುತ್ತಾ' ಎಂಬುದನ್ನು 'ಬರ್ತಾ' ಬರೆದರೆ, ಅದು ತಪ್ಪು, ಏಕೆಂದರೆ, 'ರ್ತಾ' ಇಲ್ಲಿ, ಒತ್ತಕ್ಕರದ ನಿಯಮ ಉಲ್ಲಂಗನೆಯಾಗುತ್ತದೆ.
ಮಹಾಪರಾಣಗಳು ಏಕೆ ಬೇಡ?
ಸಕ್ಕದದಿಂದ ಅತವಾ ಇನ್ನಾವುದೇ ನುಡಿಯಿಂದ ತಂದ ಮಹಾಪರಾಣವಿರುವ ಯಾವುದೇ ಪದ, ಮಹಾಪರಾಣವನ್ನು ಕಳೆದುಕೊಂಡು, ಕನ್ನಡದ್ದಾಗಿದೆ.
ಉದಾ:
೧) 'ಘಂ'ಟೆ - ಗಂಟೆ, 'ಭ'ಕ್ತಿ - ಬಕುತಿ, ಭೂಮಿ - ಬೂಮಿ,ಬುವಿ (ನೆಲ), ಹಲವು.
೨) ಸಂಧರ್ಭ ಸರಿಯೇ, ಸಂದರ್ಭ ಸರಿಯೇ? ಇಂತಹ ತಲೆಬುಡವಿರದ ಕೇಳಿಕೆ(ಪ್ರಶ್ನೆ)ಗಳೇಕೆ ಹುಟ್ಟುತ್ತವೆ? ಸಂಧರ್ಭ, ಸಂದರ್ಭ ಎರಡೂ ತಪ್ಪು, ಸಂದಬ್ಬ ಸರಿಯಾದ ಬಳಕೆ. ಏಕೆಂದರೆ, ' ಒತ್ತಕ್ಕದ ಕಟ್ಟಳೆ '.
೩) ಮಹಾಪರಾಣದ ನಿರ್ ಬಳಕೆಯಿಂದ, ಮಹಾಪರಾಣವಿರುವ ನುಡಿಯಿಂದ ಬಂದ ಪದ, ಸರಳವಾಗಿ, ಮತ್ತು ಬಲು ಬೇಗ ಕನ್ನಡದ ಪದವಾಗಿ ಹೋಗುತ್ತದೆ.
ಶ, ಷ ಗಳನ್ನೂ ಬೇಡವೆಂದು ಹೇಳುತ್ತಿರುವುದು ಇದೇ ಕಾರಣಕ್ಕೆ. ಉದಾ: ಘೋಷಣೆ - ಗೋಸಣೆ.
'ವ' ದ ಒಗಟು
ಕನ್ನಡದಲ್ಲಿ 'ವ' ದಿಂದ ಸುರುವಾಗುವ ಪದಗಳಿಲ್ಲ. 'ವ' ದಿಂದ ಸುರುವಾಗುವ ಪದಗಳೆಲ್ಲವೂ ಹೊರಗಿನವೇ.
ವಿಮಾನ - ಇಮಾನ, ವಿಚಾರ - ಇಚಾರ, ವ್ಯವಸಾಯ - ಬೇಸಾಯ, ವ್ಯಂಜನ - ಬೆಂಜನ, ವ್ಯಾಕರಣ - ಬೇಗರಣ
ವೆಂಕ - ಯಂಕ, ವೇದಿಕೆ - ಯೇದಿಕೆ, ವಿನಯ - ಇನಯ
ಬರವಣಿಗೆಯಲ್ಲಿ 'ವ' ನ್ನು ಬೇರೆ ಅಕ್ಕರದೊಂದಿಗೆ ಬರೆದರೂ ಮಾತನಾಡುವಾಗ ಹೆಚ್ಚಿನ ಬಾರಿ, 'ಒ' ಆಗುವುದು.
ಸ್ವಚ್ಚ - ಸೊಚ್ಚ, ಸ್ವಂತ - ಸೊಂತ, ಸ್ವಲ್ಪ - ಸೊಲುಪ, ಬಹುಸ ಈ ಪದಗಳನ್ನು ಮೊದಲು ಹೀಗೆಯೇ ಬರೆಯುತ್ತಿದ್ದರೇನೋ. ಸಕ್ಕದದ ಬೆನ್ನು ಬಿದ್ದ ಬರಹಗಾರರು, "ಒತ್ತಕ್ಕರದ ಕಟ್ಟಳೆ" ಯನ್ನು ಗಾಳಿಗೆ ತೂರಿದ್ದರಿಂದ ಅವು ಬದಲಾಗಿವೆ.
ಸೊಕ್ಕು,ಸೊನ್ನೆ,ಸೊಲ್ಲು,ಸೊಪ್ಪು,ಸೊಂಡಿಲು,ಸೊಗಸು,ಸೊಗಡು ಈ ಪದಗಳಂತೆಯೇ ಮೇಲೆ ಮಾದರಿಸಿದ ಪದಗಳನ್ನು ಬರೆಯಬೇಕು.
ಯಾವುದೇ ಕನ್ನಡ ಬರಹವನ್ನು ಓದುವಾಗ ನಡುವೆ ಬರುವ ಸಕ್ಕದದ, ಇಲ್ಲವೇ ಬೇರೆ ಯಾವುದೇ ನುಡಿಯ, ಹೆಚ್ಚಿನ ಪದಗಳು ಒತ್ತಕ್ಕರದ ಕಟ್ಟಳೆ ಯನ್ನು ಮೀರುವ ಇಲ್ಲವೇ ವ ದಿಂದ ಸುರುವಾಗುವ ಪದಗಳೇ ಆಗಿವೆ.
ಮೈಸೂರು ಮಲ್ಲಿಗೆ : ಏಕೆ ಮೈಸೂರು ಮಲ್ಲಿಗೆ, ಎಲ್ಲರಿಗೂ ಹಿಡಿಸುವುದು? ಬರೆದು ಏಸು ಕಾಲವಾಗಿದ್ದರೂ ಅದರಲ್ಲಿ ಬರುವ ಹಾಡುಗಳು, ಎಲ್ಲರಿಗೂ ಮನಸ್ಸಿಗೆ ಮುದ ನೀಡುವವು. ಬಳೆಗಾರ ಚೆನ್ನಯ್ಯನ ಹಾಡು ಏನು ಸೊಗಸಾಗಿದೆ!. ಇದನ್ನು ಗಮನಿಸಿದಾಗ, ಇದರಲ್ಲಿ ಸಕ್ಕದದ ಪದಗಳ ಬಳಕೆಯಾಗಲಿ, ಮಹಾಪ್ರಾಣಗಳ ಬಳಕೆಯಾಗಲಿ ಇಲ್ಲವೇ ಇಲ್ಲ, ಇದ್ದರೂ ಅವು ಕನ್ನಡದ ನೇಮಗಳನ್ನು ಪಾಲಿಸುತ್ತವೆ. ಏಕೆಂದರೆ "ಬೆರಕೆ ಪದಗಳು" (ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ) ಕನ್ನಡ ಹಾಡುಗಳಲ್ಲಿ ಹೊಂದುವದಿಲ್ಲ, ಮಾತನಾಡುವದರಲ್ಲೂ ಹೊಂದುವದಿಲ್ಲ.
ಜಯ ಕರುನಾಡ ತಾಯಿ.
ಕನ್ನಡದ ನಿಜ ಅಕ್ಕರಪಟ್ಟಿ :-
ದನಿಗಳು :- ಅ,ಆ,ಇ,ಈ,ಉ,ಊ,ಎ,ಏ,ಐ,ಒ,ಓ,ಔ,ಅಂ
ಬೆಂಜನಗಳು :-
ಕ, ಗ, ಙ
ಚ, ಜ, ಞ
ಟ, ಡ, ಣ
ತ, ದ, ನ
ಪ, ಬ, ಮ
ಯ, ರ, ಲ, ವ, ಸ, ಹ, ಳ
ಕಟ್ಟಳೆಗಳು
ಒತ್ತಕ್ಕರ ಕಟ್ಟಳೆ :- ಒತ್ತು+ಅಕ್ಕರ ( ಒತ್ತು ಅಕ್ಷರ ). ಅಂದರೆ ಕನ್ನಡದಲ್ಲಿ ಒಂದು ಅಕ್ಕರವನ್ನು ಒತ್ತಿ ಹೇಳುವದನ್ನು, ಬರೆಯುವಾಗ, ಆ ಅಕ್ಕರದ ಕೆಳಗೆ ಅದೇ ಅಕ್ಕರವನ್ನು ಬರೆಯಲಾಗುತ್ತದೆ.
ಉದಾ: ಕಲ್ಲು, ಮುಳ್ಳು, ಸುಳ್ಳು, ಅಕ್ಕರೆ, ಸಕ್ಕರೆ, ಅಗ್ಗ, ಹಿಗ್ಗು, ಸುಗ್ಗಿ, ನುಗ್ಗು, ಪಕ್ಕ, ಚುಕ್ಕ ಹೀಗೆ ಹಲವಾರು.ಪೊಳ್ಳು, ಗೊಳ್ಳು, ಗೊಡ್ಡು, ಮುತ್ತು, ಸುತ್ತು, ತುತ್ತು, ಕತ್ತು, ಕುತ್ತು, ಸೊತ್ತು. ಬಹಳ ಇವೆ.
ಕಟ್ಟಳೆಯ ಉಲ್ಲಂಗನೆ :- ಒತ್ತಕ್ಕರ ಎಂಬ ಪದದಲ್ಲಿಯೇ 'ಒತ್ತು' ಇದೆ. ಅಂದರೆ ಆ ಅಕ್ಕರವನ್ನು ಒತ್ತಿ ಹೇಳುವುದು. ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರವನ್ನು ಬರೆದರೆ(ಉದಾ: ಪ್ರ), ಅದು ಬೆರಕೆಯಾಗುತ್ತದೆ, ಒತ್ತಕ್ಕರ ಹೇಗಾಗುತ್ತದೆ? ಇದರಲ್ಲಿ ತಪ್ಪಿದ್ದಲ್ಲಿ ತಿಳಿಸಿ.
ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ ಇರುವ ಪದಗಳೆಲ್ಲವೂ ಹೊರಗಿನವೇ ಆಗಿವೆ. ಉದಾ: ಪತ್ರ, ಚಿತ್ರ, ಪಾತ್ರ, ವಿನಮ್ರ, ವಿಕ್ರಮ, ವಿಕ್ರಯ, ಹೀಗೆ ಬಹಳ ಪದಗಳು. ಈ ಪದಗಳು ಕನ್ನಡಿಗರಿಗೆ ಹೊಂದಿಲ್ಲ. ಟಪಾಲು, ಕಾಗದ(ಕಾಗಜ್ ನಿಂದ ಬಂದದ್ದು), ಇಂತವು ಹೊರಗಿನವಾದರೂ ಒತ್ತಕ್ಕರದ ಕಟ್ಟಳೆ ಕಾಪಾಡುವದರಿಂದ ಅವು ಬಲು ಬೇಗ ಕನ್ನಡದ ಪದಗಳಾಗಿವೆ.
ಒಂದು ಉದಾಹರಣೆ: ಡಾ.ರಾಜಣ್ಣರ 'ಬಂಗಾರದ ಪಂಜರ' ಸಿನಿಮಾ ನೀವು ಒಮ್ಮೆ ನೋಡಿರಿ, ಅದರಲ್ಲಿ ಬರುವ ಒಂದು ಸೀನಿನಲ್ಲಿ, ಬೀರ(ರಾಜಣ್ಣ) ಅವನ ತಮ್ಮನ ಜೊತೆ 'ಕ್ಲಬ್' ಗೆ ಹೋಗಿರುತ್ತಾನೆ. ಮರುದಿನ ಅವರ ಅಪ್ಪ(ಲೋಕನಾತ್) 'ನಿನ್ನೆ ರಾತ್ರಿ ಎಲ್ಲಿಗೆ ಹೋಗಿದ್ದೆ' ಅಂತ ಕೇಳುತ್ತಾನೆ, ಅದಕ್ಕೆ ಬೀರ " ದಾಡಿ(ಡ್ಯಾಡಿ) ನಾನು, 'ಕಿಲುಬಿ'ಗೆ ಹೋಗಿದ್ದೆ " ಅನ್ನುತಾನೆ. 'ಅಶಿಕ್ಷಿತನಾದ' ಬೀರ 'ಕ್ಲಬ್' ನ್ನು ಕಿಲುಬು ಮಾಡಿ ತನ್ನ ಪದವಾಗಿಸಿಕೊಳ್ಳುತ್ತಾನೆ. 'ಸುಶಿಕ್ಷಿತನಾದ' ಅವರ ಅಪ್ಪ ಅದನ್ನು 'ಕ್ಲಬ್' ಎಂದು ತಿದ್ದುತ್ತಾನೆ. :-(
'I was born intelligent, but education ruined me' ಅಂತಾರಲ್ಲ ಹಾಗೆ.
'ಕ್ಲಬ್' ಎಂದು ಬರೆಯುವಲ್ಲಿ ಒತ್ತಕ್ಕರದ ಕಟ್ಟಳೆ ಉಲ್ಲಂಗನೆಯಾಗುವದರಿಂದ ಅದು ಹೊರಗಿನ ಪದವಾಗೇ ಉಳಿಯುತ್ತದೆ. ಅದು 'ಕಲಬು' ಆದರೆ ಅಲಗು, ಮುಲುಕು, ಮೆಲುಕು ಹೀಗೆ ಹಲವಾರು ಪದಗಳಂತೆಯೇ ಇರುವದರಿಂದ ಬಹು ಬೇಗ ಕನ್ನಡ ಪದವಾಗುತ್ತದೆ.
ಹೀಗೆ, ಒಂದು ಅಕ್ಕರದಡಿ ಇನ್ನೊಂದು ಅಕ್ಕರ ಬರುವ ಯಾವುದೇ ಪದ ತೆಗೆದುಕೊಳ್ಳಿ, ಅದನ್ನವರು ನಿಯಮಾನುಸಾರ ತಿದ್ದಿಯೇ ಆಡುತ್ತಾರೆ. ಉದಾ; ಬರಹದಲ್ಲಿ ಬಹಳ ಸಾಮಾನಿಯಾಗಿ(ಸಾಮಾ 'ನ್ಯ' ವಾಗಿ) ಬಳಸುವ 'ಪ್ರಾಣ' ತೆಗೆದುಕೊಳ್ಳಿ, ಅದನ್ನವರು 'ಪಿರಾಣ', ಇಲ್ಲವೇ 'ಪರಾಣ' ಎನ್ನುತ್ತಾರೆ. 'ರಾತ್ರಿ' ಎಂಬುದನ್ನು 'ರಾತರಿ' ಎನ್ನುತ್ತಾರೆ. 'ಚಿತ್ರ' - ಚಿತ್ತಾರ. 'ಸ್ವಚ್ಛ' - ಸೊಚ್ಚ. ಸ್ವಲ್ಪ - ಸೊಲುಪ. ಇಂತಹ ಎಲ್ಲ ಬೆರಕೆ ಪದಗಳು.
ಈಗ ಹೇಳಿ, ಯಾರು ಕಲಿತವರು(ಸುಶಿಕ್ಷಿತರು), ನಾವಾ? ಹಳ್ಳಿಗರಾ?
ಒಂದು ವಿವರಣೆ :- ಬರವಣಿಗೆಯಲ್ಲಿ 'ಬರುತ್ತೀರಾ?' ಎಂದು ನಾವು ಬರೆಯುತ್ತೇವೆ. ಅದನ್ನು ಆಡುವಾಗ 'ಬರ್ತೀರಾ?' ಆಗುತ್ತದೆ. 'ನುಡಿ ಸೊಚ್ಚತೆ ಮತ್ತು ಬರಹದ ಸೊಚ್ಚತೆ' ಬೇರೆ, ಬೇರೆ(OLN ರ 'ಮಡಿ ಭಾಷೆ,ಮಡಿ ಭಾಷೆ' ಬಲಾಗ ನೋಡಿ) ಎಂದು ಹೇಳುವುದನ್ನು, ಈ ಬೆಳಕಿನಲ್ಲಿ ನೋಡಿದಾಗ ಅದು ಸರಿ ಎನ್ನಬಹುದು. 'ಬರುತ್ತಾ' ಎಂಬುದನ್ನು 'ಬರ್ತಾ' ಬರೆದರೆ, ಅದು ತಪ್ಪು, ಏಕೆಂದರೆ, 'ರ್ತಾ' ಇಲ್ಲಿ, ಒತ್ತಕ್ಕರದ ನಿಯಮ ಉಲ್ಲಂಗನೆಯಾಗುತ್ತದೆ.
ಮಹಾಪರಾಣಗಳು ಏಕೆ ಬೇಡ?
ಸಕ್ಕದದಿಂದ ಅತವಾ ಇನ್ನಾವುದೇ ನುಡಿಯಿಂದ ತಂದ ಮಹಾಪರಾಣವಿರುವ ಯಾವುದೇ ಪದ, ಮಹಾಪರಾಣವನ್ನು ಕಳೆದುಕೊಂಡು, ಕನ್ನಡದ್ದಾಗಿದೆ.
ಉದಾ:
೧) 'ಘಂ'ಟೆ - ಗಂಟೆ, 'ಭ'ಕ್ತಿ - ಬಕುತಿ, ಭೂಮಿ - ಬೂಮಿ,ಬುವಿ (ನೆಲ), ಹಲವು.
೨) ಸಂಧರ್ಭ ಸರಿಯೇ, ಸಂದರ್ಭ ಸರಿಯೇ? ಇಂತಹ ತಲೆಬುಡವಿರದ ಕೇಳಿಕೆ(ಪ್ರಶ್ನೆ)ಗಳೇಕೆ ಹುಟ್ಟುತ್ತವೆ? ಸಂಧರ್ಭ, ಸಂದರ್ಭ ಎರಡೂ ತಪ್ಪು, ಸಂದಬ್ಬ ಸರಿಯಾದ ಬಳಕೆ. ಏಕೆಂದರೆ, ' ಒತ್ತಕ್ಕದ ಕಟ್ಟಳೆ '.
೩) ಮಹಾಪರಾಣದ ನಿರ್ ಬಳಕೆಯಿಂದ, ಮಹಾಪರಾಣವಿರುವ ನುಡಿಯಿಂದ ಬಂದ ಪದ, ಸರಳವಾಗಿ, ಮತ್ತು ಬಲು ಬೇಗ ಕನ್ನಡದ ಪದವಾಗಿ ಹೋಗುತ್ತದೆ.
ಶ, ಷ ಗಳನ್ನೂ ಬೇಡವೆಂದು ಹೇಳುತ್ತಿರುವುದು ಇದೇ ಕಾರಣಕ್ಕೆ. ಉದಾ: ಘೋಷಣೆ - ಗೋಸಣೆ.
'ವ' ದ ಒಗಟು
ಕನ್ನಡದಲ್ಲಿ 'ವ' ದಿಂದ ಸುರುವಾಗುವ ಪದಗಳಿಲ್ಲ. 'ವ' ದಿಂದ ಸುರುವಾಗುವ ಪದಗಳೆಲ್ಲವೂ ಹೊರಗಿನವೇ.
ವಿಮಾನ - ಇಮಾನ, ವಿಚಾರ - ಇಚಾರ, ವ್ಯವಸಾಯ - ಬೇಸಾಯ, ವ್ಯಂಜನ - ಬೆಂಜನ, ವ್ಯಾಕರಣ - ಬೇಗರಣ
ವೆಂಕ - ಯಂಕ, ವೇದಿಕೆ - ಯೇದಿಕೆ, ವಿನಯ - ಇನಯ
ಬರವಣಿಗೆಯಲ್ಲಿ 'ವ' ನ್ನು ಬೇರೆ ಅಕ್ಕರದೊಂದಿಗೆ ಬರೆದರೂ ಮಾತನಾಡುವಾಗ ಹೆಚ್ಚಿನ ಬಾರಿ, 'ಒ' ಆಗುವುದು.
ಸ್ವಚ್ಚ - ಸೊಚ್ಚ, ಸ್ವಂತ - ಸೊಂತ, ಸ್ವಲ್ಪ - ಸೊಲುಪ, ಬಹುಸ ಈ ಪದಗಳನ್ನು ಮೊದಲು ಹೀಗೆಯೇ ಬರೆಯುತ್ತಿದ್ದರೇನೋ. ಸಕ್ಕದದ ಬೆನ್ನು ಬಿದ್ದ ಬರಹಗಾರರು, "ಒತ್ತಕ್ಕರದ ಕಟ್ಟಳೆ" ಯನ್ನು ಗಾಳಿಗೆ ತೂರಿದ್ದರಿಂದ ಅವು ಬದಲಾಗಿವೆ.
ಸೊಕ್ಕು,ಸೊನ್ನೆ,ಸೊಲ್ಲು,ಸೊಪ್ಪು,ಸೊಂಡಿಲು,ಸೊಗಸು,ಸೊಗಡು ಈ ಪದಗಳಂತೆಯೇ ಮೇಲೆ ಮಾದರಿಸಿದ ಪದಗಳನ್ನು ಬರೆಯಬೇಕು.
ಯಾವುದೇ ಕನ್ನಡ ಬರಹವನ್ನು ಓದುವಾಗ ನಡುವೆ ಬರುವ ಸಕ್ಕದದ, ಇಲ್ಲವೇ ಬೇರೆ ಯಾವುದೇ ನುಡಿಯ, ಹೆಚ್ಚಿನ ಪದಗಳು ಒತ್ತಕ್ಕರದ ಕಟ್ಟಳೆ ಯನ್ನು ಮೀರುವ ಇಲ್ಲವೇ ವ ದಿಂದ ಸುರುವಾಗುವ ಪದಗಳೇ ಆಗಿವೆ.
ಮೈಸೂರು ಮಲ್ಲಿಗೆ : ಏಕೆ ಮೈಸೂರು ಮಲ್ಲಿಗೆ, ಎಲ್ಲರಿಗೂ ಹಿಡಿಸುವುದು? ಬರೆದು ಏಸು ಕಾಲವಾಗಿದ್ದರೂ ಅದರಲ್ಲಿ ಬರುವ ಹಾಡುಗಳು, ಎಲ್ಲರಿಗೂ ಮನಸ್ಸಿಗೆ ಮುದ ನೀಡುವವು. ಬಳೆಗಾರ ಚೆನ್ನಯ್ಯನ ಹಾಡು ಏನು ಸೊಗಸಾಗಿದೆ!. ಇದನ್ನು ಗಮನಿಸಿದಾಗ, ಇದರಲ್ಲಿ ಸಕ್ಕದದ ಪದಗಳ ಬಳಕೆಯಾಗಲಿ, ಮಹಾಪ್ರಾಣಗಳ ಬಳಕೆಯಾಗಲಿ ಇಲ್ಲವೇ ಇಲ್ಲ, ಇದ್ದರೂ ಅವು ಕನ್ನಡದ ನೇಮಗಳನ್ನು ಪಾಲಿಸುತ್ತವೆ. ಏಕೆಂದರೆ "ಬೆರಕೆ ಪದಗಳು" (ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ) ಕನ್ನಡ ಹಾಡುಗಳಲ್ಲಿ ಹೊಂದುವದಿಲ್ಲ, ಮಾತನಾಡುವದರಲ್ಲೂ ಹೊಂದುವದಿಲ್ಲ.
ಜಯ ಕರುನಾಡ ತಾಯಿ.
Wednesday, August 09, 2006
ಚಿಲ್ಲರೆಯಾಗುತ್ತಿದ್ದೇನೆ-ಲಲಿತಾ ನಾಯಕ್
ಮಹಾದೇವಿಯಕ್ಕಗಳ ವಚನಗಳು ಎಂಬ ಹೊತ್ತಿಗೆಯಲ್ಲಿ ಈ ಪದ್ಯದ ಸಾಲಗಳನ್ನು ನೋಡಿದೆ,
ಪೈಸೆ ಪೈಸೆಯಾಗಿ ನಾ ವೃದ್ಧಿ ಹೊಂದುತ್ತಲಿದ್ದೆ
ಹತ್ತು-ನೂರರ ಮೊತ್ತವಾಗದಿದ್ದರೂ ಕೊನೆಗೆ
ರೂಪಾಯಿ ನೋಟಾದರೂ ಆಗುತ್ತಿದ್ದೆ
ಆದರೇನು ಗೆಳೆಯಾ, ತಾಳಿ ಕಟ್ಟಿದ ಕ್ಷಣದಿಂದಲೇ
ನೀ ನನ್ನ ಚಿಲ್ಲರೆಯಾಗಿಸಿಬಿಟ್ಟೆ!
ನನ್ನ ಬುದ್ಧಿ - ಕೌಶಲ - ಪ್ರಿತಿಭೆಗಳೇನಿದ್ದರೂ
ನಿನ್ನ ಹೊಟ್ಟೆ ನೆತ್ತಿ ಜೋಪಾನ ಮಾಡುವಷ್ಟಕ್ಕೆ
ನನ್ನ ಅಂಗಾಂಗಗಳು ನಿನ್ನ ಇಂದ್ರಿಯಗಳಿಗೆ
ಸ್ಪೂರ್ತಿ - ಚೇತನ, ಖುಷಿ ನೀಡುವಷ್ಟಕ್ಕೆ
ಸೀಮಿತವೆಂದು ನಿರ್ಣಯಿಸಿರುವ ನಿನ್ನ
ಶತಮಾನಗಳ ಗೊಡ್ಡು ನಂಬಿಕೆಗೆ
"ದಿಕ್ಕಾರ"ಕ್ಕಿಂತ ಮಿಗಿಲಾದ
ಶಕ್ತಿಯುತ ಶಬ್ದಕ್ಕಾಗಿ ಹುಡುಕುತ್ತಿದ್ದೇನೆ!
ಹಾಲುಣಿಸಿ ತಣಿಸುವ ನನ್ನ
ಜೀವಪೋಷಕ ಮೊಲೆಗಳಿಗಿಂತಲೂ
ಕತ್ತರಿಗೆ ಸಿಕ್ಕಿ ಕಸವಾಗಿ ಬಿಡಬಹುದಾದ
ನಿನ್ನ ಗಡ್ಡ ಮೀಸೆಗಳೇ ಮಿಗಿಲೆಂದು
ಬೀಗುವ ನಿನ್ನ ಮೂರ್ಖತನಕ್ಕೆ ಅಚ್ಚರಿಗೊಳ್ಳುತ್ತಿದ್ದೇನೆ
'ತಂದೆತನ' ನಿನ್ನ ಬದುಕಿನ ಒಂದಶ ಮಾತ್ರವಾದರೆ
ಆ ಮಾತು ಅನ್ವಯಿಸುವುದು ನನ್ನ 'ತಾಯ್ತಕ್ಕೂ'
ಎಂಬ ಕಿವಿಮಾತೊಂದ ಹೇಳಲು
ಸಮಯ ಕಾಯುತ್ತಿದ್ದೇನೆ.
--ಲಲಿತಾ ನಾಯಕ್
ಪೈಸೆ ಪೈಸೆಯಾಗಿ ನಾ ವೃದ್ಧಿ ಹೊಂದುತ್ತಲಿದ್ದೆ
ಹತ್ತು-ನೂರರ ಮೊತ್ತವಾಗದಿದ್ದರೂ ಕೊನೆಗೆ
ರೂಪಾಯಿ ನೋಟಾದರೂ ಆಗುತ್ತಿದ್ದೆ
ಆದರೇನು ಗೆಳೆಯಾ, ತಾಳಿ ಕಟ್ಟಿದ ಕ್ಷಣದಿಂದಲೇ
ನೀ ನನ್ನ ಚಿಲ್ಲರೆಯಾಗಿಸಿಬಿಟ್ಟೆ!
ನನ್ನ ಬುದ್ಧಿ - ಕೌಶಲ - ಪ್ರಿತಿಭೆಗಳೇನಿದ್ದರೂ
ನಿನ್ನ ಹೊಟ್ಟೆ ನೆತ್ತಿ ಜೋಪಾನ ಮಾಡುವಷ್ಟಕ್ಕೆ
ನನ್ನ ಅಂಗಾಂಗಗಳು ನಿನ್ನ ಇಂದ್ರಿಯಗಳಿಗೆ
ಸ್ಪೂರ್ತಿ - ಚೇತನ, ಖುಷಿ ನೀಡುವಷ್ಟಕ್ಕೆ
ಸೀಮಿತವೆಂದು ನಿರ್ಣಯಿಸಿರುವ ನಿನ್ನ
ಶತಮಾನಗಳ ಗೊಡ್ಡು ನಂಬಿಕೆಗೆ
"ದಿಕ್ಕಾರ"ಕ್ಕಿಂತ ಮಿಗಿಲಾದ
ಶಕ್ತಿಯುತ ಶಬ್ದಕ್ಕಾಗಿ ಹುಡುಕುತ್ತಿದ್ದೇನೆ!
ಹಾಲುಣಿಸಿ ತಣಿಸುವ ನನ್ನ
ಜೀವಪೋಷಕ ಮೊಲೆಗಳಿಗಿಂತಲೂ
ಕತ್ತರಿಗೆ ಸಿಕ್ಕಿ ಕಸವಾಗಿ ಬಿಡಬಹುದಾದ
ನಿನ್ನ ಗಡ್ಡ ಮೀಸೆಗಳೇ ಮಿಗಿಲೆಂದು
ಬೀಗುವ ನಿನ್ನ ಮೂರ್ಖತನಕ್ಕೆ ಅಚ್ಚರಿಗೊಳ್ಳುತ್ತಿದ್ದೇನೆ
'ತಂದೆತನ' ನಿನ್ನ ಬದುಕಿನ ಒಂದಶ ಮಾತ್ರವಾದರೆ
ಆ ಮಾತು ಅನ್ವಯಿಸುವುದು ನನ್ನ 'ತಾಯ್ತಕ್ಕೂ'
ಎಂಬ ಕಿವಿಮಾತೊಂದ ಹೇಳಲು
ಸಮಯ ಕಾಯುತ್ತಿದ್ದೇನೆ.
--ಲಲಿತಾ ನಾಯಕ್
ಕನ್ನಡ ಭಾವಗೀತೆಗಳ ಲೋಕ
ಕನ್ನಡ ಭಾವಗೀತೆಗಳ ಲೋಕ ನಿಜವಾಗಿ ರಮ್ಯವಾಗಿದೆ. ಸಿ.ಅಶ್ವತ್ರ ಹಾಡುಗಳನ್ನು ಕೇಳಲು ನಿಜವಾಗಿಯೂ ಆನಂದವಾಗುತ್ತದೆ. ಇಂದೇ ಅಶ್ವತ್ರ ಅಲ್ಬಮ್ವೊಂದನ್ನು ಕೊಳ್ಳಿ, ಕೇಳಿ ಆನಂದಿಸಿ, ಕನ್ನಡ ಭಾವಗೀತೆಗಳ ಲೋಕಕ್ಕೆ ಸ್ವಾಗತ. ಇದರಲ್ಲಿಯ ಒಳ್ಳೊಳ್ಳೆ ಗೀತೆಗಳನ್ನು ಮತ್ತು ಹಾಡುಗಾರರನ್ನು ನಮ್ಮ ಚಿತ್ರರಂಗ ಏಕೆ ಬಳಸಿಕೊಳ್ಳಬಾರದು? ಇದರಿಂದ ಭಾವಗೀತೆಗಳಿಗೆ ಹೆಚ್ಚಿನ ಪ್ರಚಾರ ದೊರೆಯುವುದಲ್ಲದೆ, ಹಿನ್ನೆಲೆ ಸಂಗೀತ ಮೇಳದಲ್ಲಿ ಗಿಟಾರ್ ಇತ್ಯಾದಿಯಂತಹ ಅಧುನಿಕ ವಾದ್ಯಗಳನ್ನು ಬಳಸುವದರಿಂದ ಹಾಡು ಹೆಚ್ಚು 'ತಾಂತ್ರಿಕವಾಗಿ' ಸಮೃದ್ಧವಾಗತ್ತೆ. ಹಿಂದಿಯಲ್ಲಿ ಗಜಲ್ಗಳನ್ನು ಬಳಸಿಕೊಳ್ಳುತಾರಲ್ಲ, ಹಾಗೆ.
Wednesday, July 12, 2006
Monday, July 10, 2006
ಯಾವುದೀ ಹೊಸ ರಾಗ
94.3 M.Hz ಕಂಪನಾಂಕಗಳಲ್ಲಿ ಹೊಸ ರೇಡಿಯೋ ಪ್ರಾರಂಭವಾಗಿದೆ. ರೇಡಿಯೋ ಜಾಕಿ ಇಲ್ಲ, ಬರೀ ಇಂಗ್ಲಿಷ್ ಮತ್ತು ಹಿಂದಿ ಹಾಡುಗಳು ಬರುತ್ತವೆ, ಇದು ಯಾವ ರೇಡಿಯೋ ?
Uppi says allowing dubbed movies is better
Once in an interview real star Upendra said, allowing dubbed movies in karnataka will not only help the language but also to the industry. As by releasing dubbed movies the admirers of other language stars will watch their movies in kannada and eventually they will start seeing kannada movies also. This will help the indudtry to increase its audience, then why the kannada film industry people are still holding the issue. With better competation and producing quality movies equal to other indusrty movies, kannada industry can survive.
Sunday, July 02, 2006
Allow dubbed movies in karnataka.
Currently there is need of dubbed movies in karnataka. This may make kannada industry to compete, and healthy competation makes it to grow. But in the long run, it helps the industry and the language. Movies are big support for language now a days. Please allow dubbing in karnataka, we will get atleast good songs from other language talents. If you see in google trends and compare kannada with other south indian languages, kannada stands at last. Please prevent attack of other languages in the name of movies. Kannada film industry has imposed heavy burden upon langauge to prevent its competators. Any language can grow only by including the knowledge of the world in it. Come out of the misconception that only other language people in karnataka watch non-kannada movies.kannadagas themselves like watching other langauage films and its natural flow of human mind to gain knowledge along with good entertainment. Please dont force kannadigas to watch movies in other language. We want to know the world through the window of kannada. Please allow for it. All kannadigas need to understand this and allow only dubbed movies from other language in karnataka. My dear all kannadigas our politicians, kannada industry people, and all those who are at higher authorities need to understand this, Lets first make kannada to stand up, then our industry as well will standup.Jaya kannadambe.
ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ
ಗೆಳೆಯರೇ, ಒಂದು ಭಾಷೆ ಸಮ್ರುಧ್ಧವಾಗಬೇಕಾದರೆ, ಜಗತ್ತಿನ ಸರ್ವ ವಿಷಯಗಳನ್ನು ಅದು ತನ್ನೊಳಗೆ ಅಡಗಿಸಿಕೊಳ್ಳಬೇಕು. ಆದರೆ ಕನ್ನಡ ಚಿತ್ರರಂಗದವರ ಸ್ವಾರ್ಥ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಕನ್ನಡ ಭಾಷೆಯೇ ಬಡವಾಗಿದೆ. ಶ್ರವಣ ಮತ್ತು ದ್ರುಶ್ಯ ಮಾಧ್ಯಮವು ಅಕ್ಷರ ಮಾಧ್ಯಮಕ್ಕಿಂತ ಪ್ರಭಾವಶಾಲಿಯಾಗಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಈಗ ಕನ್ನಡವನ್ನು ಕಾಪಾಡಬೇಕಾಗಿರುವುದು, ಹೊರಗಿನವರಿಂದಲ್ಲ ಕನ್ನಡ ಚಿತ್ರರಂಗದವರಿಂದ. ಹೌದು. ನಾನು ಹೇಳುತ್ತಿರುವುದು ಕರ್ನಾಟಕದಲ್ಲಿ ಡಬ್ಬಿಂಗ ಚಿತ್ರಗಳನ್ನು ದೂರವಿಟ್ಟಿರುವುದರ ಬಗ್ಗೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳುತ್ತದೆ ಅದು ಬೇಡ ಅಂತನೇ ಹೆಚ್ಚಿನವರು ನಂಬಿದ್ದಾರೆ. ಬೆಂಗಳೂರಿನ ಕೆಲವು ಜನರನ್ನು ಕಾಯುವ ಹೊಣೆ ಹೊತ್ತು ಕನ್ನಡ ತಾಯಿ ಭುವನೇಶ್ವರಿ ಕ್ರುಷವಾಗಿದ್ದಾಳೆ. ಸ್ವಾಮಿ ಕನ್ನಡ ಚಿತ್ರರಂಗವನ್ನು ಒಂದು ಮುಕ್ತ ಅಖಾಡವಾಗಿಸಿರಿ, ಇದರಿಂದ ಭಾಷೆ ಸಮ್ರುದ್ಧಿಯಾಗಿ ಬೆಳೆಯುವುದಷ್ಟೇ ಅಲ್ಲ ಕನ್ನಡ ಚಿತ್ರೋದ್ಯಮವೂ ತೆಲುಗು ಮತ್ತು ತಮಿಳು ಚಿತ್ರರಂಗಗಳಂತೆ ವಿಶಾಲವಾಗುತ್ತದೆ. ದಯವಿಟ್ಟು ಕನ್ನಡವನ್ನು ನಮ್ಮದೇ ಚಿತ್ರೋದ್ಯಮದವರ ಕೈಯಿಂದ ಮುಕ್ತಗೊಳಿಸಿ, ಇಲ್ಲವಾದರೆ ಕನ್ನಡಕ್ಕೆ ಬೀಳುತ್ತಿರುವ ಹೊಡೆತಗಳು ಅವ್ಯಾಹತವಾಗಿ ಸಾಗಿರುತ್ತವೆ. ಇಂದು ಕನ್ನಡ ಚಿತ್ರರಂಗ ಬೆಳೆದಿದೆ, ಈಗಲಾದರೂ ಮುಕ್ತ ಸ್ಪರ್ದೆಗೆ ಸಿದ್ಧರಾಗಿ, ಕನ್ನಡ ನಾಡಿನಲ್ಲಿ ನಮ್ಮದಲ್ಲದ ಭಾಷೆಯಲ್ಲಿ ಚಿತ್ರ ನೋಡಬೇಕಾದ ವಿಪರ್ಯಾಸವನ್ನು ತಪ್ಪಿಸಿ. ತಮಿಳು ಮತ್ತು ತೆಲುಗು ಭಾಷೆಗಳು ತಮ್ಮ ಚಿತ್ರಗಳ ಮೂಲಕ ನಿರಂತರವಾಗಿ ಕರ್ನಾಟಕದೊಳಗೆ ನುಸುಳುತ್ತಿವೆ. ಅಪ್ಪಟ ಕನ್ನಡ ಒಳನಾಡುಗಳಲ್ಲೂ ಹೊರಗಿನ ಭಾಷೆಯ ಚಿತ್ರಗಳು ದಾಳಿ ನಡೆಸಿವೆ. ಆದರೆ ಕನ್ನಡ ಚಿತ್ರಗಳ ಮೂಲಕ ಅವರ ನಾಡಿಗೆ ವಿಚಾರಗಳು ತಲುಪುತ್ತವೆಯೇ ಹೊರತು ಭಾಷೆ ಕಿಂಚಿತ್ತೂ ಇಣುಕದು, ಅಂದ ಮೇಲೆ ಭಾಷೆಯ ಬೆಳವಣಿಗೆಯಾದರೂ ಹೇಗೆ ಸಾಧ್ಯ. ಚಿತ್ರರಂಗದವರ ಈ ಧೋರಣೆಯಿಂದ ಕನ್ನಡಕ್ಕೆ A.R.ರೆಹಮಾನ್ರಂತ ಅದ್ಭುತ ಪ್ರತಿಭೆಯ ಸಂಗೀತ ದೊರಕಿಲ್ಲ, ಅದೇ ತೆಲುಗು ಮತ್ತು ತಮಿಳು ರಂಗಗಳನ್ನು ನೋಡಿ, ಅವರು ಇಂಗ್ಲಿಷ್ ಚಿತ್ರಗಳನ್ನು ಮೊದಲುಗೊಂಡು ಎಲ್ಲವನ್ನು ತಮ್ಮ ಭಾಷೆಗೆ ಅಳವಡಿಸಿಕೊಂಡು ತಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿಕೊಂಡಿರುವುದಷ್ಟೇ ಅಲ್ಲದೇ ಅದರಿಂದ ಅವರ ಚಿತ್ರರಂಗ ಅದ್ಭುತ ಚಿತ್ರಗಳನ್ನು ನಿರ್ಮಿಸಲು ಅನುಕೂಲವಾಗಿದೆ. ಬೇರೆ ಭಾಷೆಯವರು,ಅವರೇ ಏಕೆ ನಮ್ಮವರೇ, ನಮ್ಮ ಚಿತ್ರಗಳನ್ನು ಅಸಡ್ಡೆ ಧೋರಣೆಯಿಂದ ನೋಡುವುದು ಇದೇ ಕಾರಣದಿಂದ. ಬೆಂಗಳೂರಿನ ಚಿದ್ರೋದ್ಯಮದವರೇಕೇ ಇಷ್ಟೊಂದು ಆತ್ಮವಿಶ್ವಾಸವಿಲ್ಲದರಾಗಿದ್ದಾರೆ. ಮುಂಚಿನಿಂದಲೂ ಡಬ್ಬಿಂಗಗೆ ಅವಕಾಶವಿದ್ದಲ್ಲಿ ಇಂದು ಕನ್ನಡ ಖಂಡಿತವಾಗಿ ಈ ಸ್ಥಿತಿಯಲ್ಲಿರುತ್ತಿರಲಿಲ್ಲ.
ಪರನಾಡಿನ ಲೇಖಕರು ಕನ್ನಡ ಸಾರಸ್ವತ ಲೋಕಕ್ಕೆ ಎಷ್ಟೋ ಕೊಡುಗೆ ನೀಡಿದ್ದಾರೆ, ಅದರಿಂದ ಕನ್ನಡ ಪುಸ್ತಕ ಲೋಕ ಶ್ರೀಮಂತವಾಗಿದೆ, ಕನ್ನಡದಲ್ಲಿ ಕನ್ನಡದವರು ಬರೆದ ಲೇಖನಗಳು ಮಾತ್ರ ಇರಬೇಕು, ಅಂತ ಆ ಬಾಗಿಲನ್ನೂ ಮುಚ್ಚಿದ್ದರೆ ಕನ್ನಡ ಇಂದು ಬದುಕಿರುತ್ತಿರಲಿಲ್ಲ. ಹೊಸದನ್ನು ತಿಳಿದುಕೊಳ್ಳಬೇಕೆಂಬ ಹಂಬಲ ಭಾಷಾಪ್ರೇಮವನ್ನೂ ಮೀರಿ ನಿಲ್ಲುತ್ತದೆ, ಭಾಷೆಯೆಂಬುದು ಒಂದು ಮಾಧ್ಯಮ ಮಾತ್ರ.ಕನ್ನಡಿಗರು ಭಾಷಾ ಪ್ರೇಮಿಗಳಲ್ಲ ಅಂತ ಎಲ್ಲರೂ ಮಾತನಾಡುತ್ತಾರೆ ಆದರೆ ಜಗತ್ತನ್ನು ಕನ್ನಡದಲ್ಲಿ ನೋಡುವ ಅವಕಾಶ ಕನ್ನಡಿಗನಿಲ್ಲ, ಇದೆಂತ ಇಬ್ಬಗೆತನ? ಈಗಲೂ ಕನ್ನಡ ಚಿತ್ರಗಳನ್ನು ನೋಡುವವರು ಬೇರೆ ಭಾಷೆ ಆಡದ ಮುಗ್ಧ ಹಳ್ಳಿಯ ಜನ ಮಾತ್ರ. ತೆಲುಗು ಮತ್ತು ತಮಿಳು ಚಿತ್ರರಂಗಗಳ ಪರಸ್ಪರ ವಿನಿಮಯದಿಂದ ಭಾಷೆಗಳು ಒಂದಕ್ಕೊಂದು ಪೂರಕವಾಗಿ ಬೆಳೆದಿವೆ. ಈಗಲಾದರೂ ನಮ್ಮ ಭಾಷೆಯನ್ನು ನಮ್ಮವರೇ ಮರೆಯುವ ಮುನ್ನ ಎಚ್ಚೆತ್ತುಕೊಳ್ಳಿ, ನಿಮ್ಮ ಕಪಿಮುಷ್ಟಿಯಿಂದ ಕನ್ನಡವನ್ನು ಬಿಡುಗಡೆಗೊಳಿಸಿ, ಕನ್ನಡಿಗರಿಗೆ ಕನ್ನಡ ಪ್ರೇಮದ ಹೆಸರಿನಲ್ಲಿ ಬೆಂಗಳೂರಿನಲ್ಲಿ ತಯಾರಾದ ಚಿತ್ರಗಳನ್ನು ಮಾತ್ರ ನೋಡಬೇಕೆಂಬ ಕಲ್ಲುಗುಂಡನ್ನು ಹೊರೆಸಬೇಡಿ, ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಗೆ ಉಸಿರಾಡಲು ಅವಕಾಶ ಕೊಡಿ, ನಾವು ನಿಮ್ಮನ್ನೇನು ಮುಳುಗಿಸುವುದಿಲ್ಲ ಬದಲಾಗಿ ನೀವು (ಕನ್ನಡ ಚಿತ್ರರಂಗದವರು) ಇನ್ನೂ ಶ್ರೀಮಂತವಾಗುವಿರಿ. ಸ್ವಾಮಿ ಸಕಲ ಕನ್ನಡ ಪ್ರೇಮಿಗಳೇ, ಸಾಹಿತಿಗಳೇ, ಕನ್ನಡ ಅಭಿವ್ರುದ್ಧಿ ಮಂಡಳಿಯವರೇ, ಸಕಲ ಕನ್ನಡಿಗರೇ ಕನ್ನಡವನ್ನು ಕನ್ನಡ ಚಿತ್ರರಂಗದವರಿಂದ ಕಾಪಾಡಿ. ಕನ್ನಡಕ್ಕೆ ಬೆಳೆಯಲು ಅವಕಾಶ ನೀಡಿ.
ನನ್ನ ಬ್ಲಾಗ್ ನೋಡಿ ಹೌದು ಅನಿಸಿದರೆ ಸುಮ್ಮನಿರಬೇಡಿ, ಎಲ್ಲರಲ್ಲೂ ಈ ಬಗ್ಗೆ ಅರಿವು ಮೂಡಿಸಿ, ಕನ್ನಡ ಬೆಳಗಬೇಕೆನ್ನುವವರಿಗೆ ನಿಮಗೆ ತಿಳಿದಿರುವ ಸಕಲ ಮಾರ್ಗಗಳನ್ನು ಬಳಸಿ ತಿಳಿಸಿರಿ, ಜಯ ಕನ್ನಡಾಂಬೆ.
ಪರನಾಡಿನ ಲೇಖಕರು ಕನ್ನಡ ಸಾರಸ್ವತ ಲೋಕಕ್ಕೆ ಎಷ್ಟೋ ಕೊಡುಗೆ ನೀಡಿದ್ದಾರೆ, ಅದರಿಂದ ಕನ್ನಡ ಪುಸ್ತಕ ಲೋಕ ಶ್ರೀಮಂತವಾಗಿದೆ, ಕನ್ನಡದಲ್ಲಿ ಕನ್ನಡದವರು ಬರೆದ ಲೇಖನಗಳು ಮಾತ್ರ ಇರಬೇಕು, ಅಂತ ಆ ಬಾಗಿಲನ್ನೂ ಮುಚ್ಚಿದ್ದರೆ ಕನ್ನಡ ಇಂದು ಬದುಕಿರುತ್ತಿರಲಿಲ್ಲ. ಹೊಸದನ್ನು ತಿಳಿದುಕೊಳ್ಳಬೇಕೆಂಬ ಹಂಬಲ ಭಾಷಾಪ್ರೇಮವನ್ನೂ ಮೀರಿ ನಿಲ್ಲುತ್ತದೆ, ಭಾಷೆಯೆಂಬುದು ಒಂದು ಮಾಧ್ಯಮ ಮಾತ್ರ.ಕನ್ನಡಿಗರು ಭಾಷಾ ಪ್ರೇಮಿಗಳಲ್ಲ ಅಂತ ಎಲ್ಲರೂ ಮಾತನಾಡುತ್ತಾರೆ ಆದರೆ ಜಗತ್ತನ್ನು ಕನ್ನಡದಲ್ಲಿ ನೋಡುವ ಅವಕಾಶ ಕನ್ನಡಿಗನಿಲ್ಲ, ಇದೆಂತ ಇಬ್ಬಗೆತನ? ಈಗಲೂ ಕನ್ನಡ ಚಿತ್ರಗಳನ್ನು ನೋಡುವವರು ಬೇರೆ ಭಾಷೆ ಆಡದ ಮುಗ್ಧ ಹಳ್ಳಿಯ ಜನ ಮಾತ್ರ. ತೆಲುಗು ಮತ್ತು ತಮಿಳು ಚಿತ್ರರಂಗಗಳ ಪರಸ್ಪರ ವಿನಿಮಯದಿಂದ ಭಾಷೆಗಳು ಒಂದಕ್ಕೊಂದು ಪೂರಕವಾಗಿ ಬೆಳೆದಿವೆ. ಈಗಲಾದರೂ ನಮ್ಮ ಭಾಷೆಯನ್ನು ನಮ್ಮವರೇ ಮರೆಯುವ ಮುನ್ನ ಎಚ್ಚೆತ್ತುಕೊಳ್ಳಿ, ನಿಮ್ಮ ಕಪಿಮುಷ್ಟಿಯಿಂದ ಕನ್ನಡವನ್ನು ಬಿಡುಗಡೆಗೊಳಿಸಿ, ಕನ್ನಡಿಗರಿಗೆ ಕನ್ನಡ ಪ್ರೇಮದ ಹೆಸರಿನಲ್ಲಿ ಬೆಂಗಳೂರಿನಲ್ಲಿ ತಯಾರಾದ ಚಿತ್ರಗಳನ್ನು ಮಾತ್ರ ನೋಡಬೇಕೆಂಬ ಕಲ್ಲುಗುಂಡನ್ನು ಹೊರೆಸಬೇಡಿ, ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಗೆ ಉಸಿರಾಡಲು ಅವಕಾಶ ಕೊಡಿ, ನಾವು ನಿಮ್ಮನ್ನೇನು ಮುಳುಗಿಸುವುದಿಲ್ಲ ಬದಲಾಗಿ ನೀವು (ಕನ್ನಡ ಚಿತ್ರರಂಗದವರು) ಇನ್ನೂ ಶ್ರೀಮಂತವಾಗುವಿರಿ. ಸ್ವಾಮಿ ಸಕಲ ಕನ್ನಡ ಪ್ರೇಮಿಗಳೇ, ಸಾಹಿತಿಗಳೇ, ಕನ್ನಡ ಅಭಿವ್ರುದ್ಧಿ ಮಂಡಳಿಯವರೇ, ಸಕಲ ಕನ್ನಡಿಗರೇ ಕನ್ನಡವನ್ನು ಕನ್ನಡ ಚಿತ್ರರಂಗದವರಿಂದ ಕಾಪಾಡಿ. ಕನ್ನಡಕ್ಕೆ ಬೆಳೆಯಲು ಅವಕಾಶ ನೀಡಿ.
ನನ್ನ ಬ್ಲಾಗ್ ನೋಡಿ ಹೌದು ಅನಿಸಿದರೆ ಸುಮ್ಮನಿರಬೇಡಿ, ಎಲ್ಲರಲ್ಲೂ ಈ ಬಗ್ಗೆ ಅರಿವು ಮೂಡಿಸಿ, ಕನ್ನಡ ಬೆಳಗಬೇಕೆನ್ನುವವರಿಗೆ ನಿಮಗೆ ತಿಳಿದಿರುವ ಸಕಲ ಮಾರ್ಗಗಳನ್ನು ಬಳಸಿ ತಿಳಿಸಿರಿ, ಜಯ ಕನ್ನಡಾಂಬೆ.
Thursday, June 29, 2006
Need for 24 hours Kannada radio
Is it so expensive to set up private radio FM in bangalore? In this kind of situation where outside national(pseudo-national) and international(english-only)entertaining companies that have established their radio channels, have totally neglected local culture of karnataka. These companies are so deaf to local voices that, even after getting tons of messages and emails they dont seem to be listening. And now with lots of pressure they have started playing few kannada songs here and there. Is this needed for us if we get a 24 hours kannada FM. They think that being national or international means neglecting local people and imposing american pop songs and hindi songs upon them. The other south indians here in bangalore are not ready to support kannada act here, because they think its not related to them. Anybody staying in bangalore should think that, this is thier duty as well. All in bangalore should unite under kannada, otherwise the gaps between people will remain for ever. All people in bangalore should come under one roof, roof of kannada. This does not mean that they should forget their language and start speaking only in kannada. They should support kannada as mass language. So my dear all bangaloreans, no matter what language you speak at home, out of home, you be a kannadiga. So I hope soon a private 24 hours kannada FM will come up and win hearts of bangalore, and unite bangaloreans.
Subscribe to:
Posts (Atom)




